ಚಿರತೆ ಹಾವಳಿಯಿಂದ ಮೃತಪಟ್ಟವರಿಗೆ ತಲಾ 15 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಶನಿವಾರ, 3 ಡಿಸೆಂಬರ್ 2022 (17:23 IST)
ಚಿರತೆ ಹಾವಳಿ ಬಗ್ಗೆ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು,ಈ ವಿಷಯವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.ಕಳೆದ ಕೆಲವು ದಿನಗಳಿಂದ ಅದರ ಬೇಟೆ ಯಾಡ್ತಿದ್ದಾರೆ, ಬಲಿ ಕೂಡ ಹಾಕ್ತಿದಾರೆ‌ಜೀವಂತವಾಗಿ ಹಿಡಿದು ಕಾಡಿಗೆ ಬಿಡುವಂತ ಕೆಲಸವನ್ನು ಇಲಾಖೆ ಗೆ ಸೂಚನೆ ಕೊಟ್ಟಿದ್ದೇನೆ.ಅದೇ ರೀತಿ ಮೈಸೂರು ಸೇರಿದಂತೆ ಹಲವು ಕಡೆ ಹಾವಳಿ ಜಾಸ್ತಿ ಯಾಗಿದೆ.ಇದಕ್ಕಾಗಿ ವಿಶೇಷ ತಂಡ ರಚಿಸಿ, ಹಾವಳಿ ಯಾಗದ ರೀತಿ ನಿಯಂತ್ರಣಕ್ಕೆ ಸೂಚನೆ ನೀಡಿದ್ದೇನೆ ಎಂದ ಸಿಎಂ ಹೇಳಿದ್ರು.
 
ಇನ್ನೂ ಮೊದಲು ಚಿರತೆ ಹಾವಳಿ ಕಾಡು ಪಕ್ಕದಲ್ಲಿ ಅಗ್ತಿತ್ತು.ಇವಾಗ ಬೆಂಗಳೂರಲ್ಲಿ ಆಗ್ತಿದೆ.ಇವಾಗ ಅದನ್ನು ಬೇಟೆ ಆಡಲು ಅಗತ್ಯ ಸೂಚನೆ ನೀಡಿದ್ದೇನೆ.ಅದನ್ನು ಆದಷ್ಟು ಬೇಗ ಹಿಡಿದು ಕಾಡಿಗೆ ಬಿಡಲು ಸೂಚಿಸಲಾಗಿದೆ.ಚಿರತೆ ಹಾವಳಿಯಿಂದ ಮೃತಪಟ್ಟವರಿಗೆ ತಲಾ 15 ಲಕ್ಷ ರೂಪಾಯಿ ಪರಿಹಾರವನ್ನ ಸಿಎಂ ಬಸವಣ್ಣ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ