ಸಿಎಂ ಯಡಿಯೂರಪ್ಪ- ಡಿಸಿಎಂ ಲಕ್ಷ್ಮಣ ಸವದಿ ಜಟಾಪಟಿ?

ಶುಕ್ರವಾರ, 15 ನವೆಂಬರ್ 2019 (16:16 IST)
ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪಿರೋದಕ್ಕೆ ಗರಂ ಆಗಿರೋ ಡಿಸಿಎಂ, ಸಿಎಂ ಜೊತೆಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮುನಿಸಿಕೊಂಡಿರೋ ಡಿಸಿಎಂ ಲಕ್ಷ್ಮಣ ಸವದಿ ಮಾತುಕತೆ ನಡೆಸಿದ್ದು, ಡಿಸಿಎಂ ಅಸಮಧಾನ ತಣಿಸುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ.

ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸೋದೇ ನನ್ನ ಗುರಿ. ಸೋತವನನ್ನು ಪಕ್ಷ ಡಿಸಿಎಂ ಮಾಡಿದೆ. ಹೀಗಾಗಿ ಪಕ್ಷ ನೀಡಿದ ಸಲಹೆಯಂತೆ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಅಂತ ಡಿಸಿಎಂ ಹೇಳಿದ್ದಾರೆ.

ನನ್ನ ಮುಂದಿನ ರಾಜಕೀಯ ಭವಿಷ್ಯವನ್ನು ಪಕ್ಷದ ವರಿಷ್ಠರೇ ನೋಡಿಕೊಳ್ಳುತ್ತಾರೆ. ಪಕ್ಷ ಹೇಳಿದಂತೆ ಕೇಳೋದೇ ನನ್ನ ಕೆಲಸ ಅಂತ ಲಕ್ಷ್ಮಣ ಸವದಿ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ