ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದ ಸತೀಶ್ ರೆಡ್ಡಿಗೆ ದರ್ಶನ್ ಸಾಥ್

ಶನಿವಾರ, 29 ಏಪ್ರಿಲ್ 2023 (20:45 IST)
ನಾಲ್ಕನೇ ಬಾರಿಗೆ ಅದೃಷ್ಟದ ‌ಪರೀಕ್ಷೆಗೆ ಇಳಿದಿರುವ ಸತೀಶ್ ರೆಡ್ಡಿ ಪರ ನಟ ದರ್ಶನ್  ಭರ್ಜರಿ ರೋಡ್ ಶೋ ನಡೆಸಿ. ಮತಯಾಚನೆ ಮಾಡಿದ್ರು. ಅರಕೆರೆಯ ಷಾಹಿ‌ ಗಾರ್ಮೇಂಟ್ಸ್, ಬೊಮ್ಮನಹಳ್ಳಿ  ರವಿಕಾ ಕ್ರಿಯೇಷನ್ ಸೇರಿದಂತೆ ಅನೇಕ ಕಡೆ ಮತಯಾಚನೆ ನಡೆಸಿದ್ರು. ಕಾಂಗ್ರೆಸ್ನವರು ಇಷ್ಟು ವರ್ಷಗಳ ಕಾಲ ಎಲ್ಲಿದ್ದರು ಈಗ ಅವರಿಗೆ ಜನ, ಕ್ಷೇತ್ರ ನೆನಪಾಗಿದೆ ನಾನು ನಿಮಗಾಗಿ ಹಗಲಿರುಳು ದುಡಿಯುವ, ದುಡಿಯುತ್ತಿರುವ ವ್ಯಕ್ತಿ ದಯವಿಟ್ಟು ಮತ್ತೊಮ್ಮೆ ನಿಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.ಇನ್ನೂ ಬೊಮ್ಮನಹಳ್ಳಿ ಯ ಬಿಳೆಕಹಳ್ಳಿ ಯಿಂದ ಶುರುವಾದ ಬೈಕ್ ರ್ಯಾಲಿ ಪುಟ್ಟೆನಹಳ್ಳಿಯ‌ ಸತ್ಯ ಗಣಪತಿಯ ದೇವಾಲಯ ಹಿಂಬಾದಿಯ ಮೈದಾನದಲ್ಲಿ ಬೃಹತ್ ಬಹಿರಂಗ ಸಭೆ ನಡೆಸಿದ್ರು.
ಕರೋನ ಟೈಂ ನಲ್ಲಿ ನಿಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ, ಅವರು ಈ ಕ್ಷೇತ್ರ ಕ್ಕೆ  ನಿರೀಕ್ಷೆ ಗೂ ಮೀರಿದ ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ ಹಾಗಾಗಿ  ಅವರಿಗೆ ಮತಹಾಕಿ ಗೆಲ್ಲಿಸಿ ಸಚಿವರನ್ನಾಗಿ ಮಾಡಿ ಎಂದ್ರು.
 
ಅರಕೆರೆಯ ಮಾಜಿ ನಗರ ಸಭಾ ಸದಸ್ಯ ಮುರಳಿ ಮಾತನಾಡಿ ಶಾಸಕರು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ. ಅಲ್ಲದೆ ಅತೀ ಹೆಚ್ಚು ಮತಗಳನ್ನ ನೀಡುವ ವಾರ್ಡ್ ಎಂದ್ರೆ ನಮ್ಮ ಅರಕೆರೆ ವಾರ್ಡ್ ಈ ಬಾರಿ ಕೂಡ ಇನ್ನೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ