ಭಾವಿ ಶಿಕ್ಷಕರ ಬಳಿ ಕ್ಷಮೆ ಕೇಳಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಶಿಕ್ಷಣ ಸಚಿವ ಮಧುಬಂಗಾರಪ್ಪ

ಶುಕ್ರವಾರ, 7 ಜುಲೈ 2023 (17:50 IST)
ನಗರದ ಫ್ರೀಡಂ ಪಾರ್ಕ್ ನಲ್ಲಿ ಭಾವಿ ಶಿಕ್ಷಕರು ಕಳೆದ 4 ದಿನದಿಂದ ಧರಣಿ ನಡೆಸುತ್ತಿದ್ರು.ಶಾಲಾ ಶಿಕ್ಷಕರ ಪ್ರತಿಭಟನಾ ಸ್ಥಳಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗಮಿಸಿದ್ರು.ಈ ವೇಳೆ ಮಾತನಾಡಿದ ಮಧು ಬಂಗಾರಪ್ಪ ಮಕ್ಕಳನ್ನ ಕರೆದುಕೊಂಡು ಬರೋದು ಮನಸ್ಸಿಗೆ ನೋವಾಗುತ್ತೆ.ಮೊದಲನೇದಾಗಿ ನಿಮ್ಮಲ್ಲಿ ಕ್ಷಮೆ ಕೇಳ್ತೀನಿ.ಸರ್ಕಾರದ ಮೇಲಿಟ್ಟಿರೋ ನಂಬಿಕೆ ಕಳೆದುಕೊಳ್ಳಬೇಡಿ .ನಮ್ಮ ತಂದೆಯವರು ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಕೆಲಸ ಮಾಡಿದ್ರು.ಈ ವಿಚಾರ ಕೋರ್ಟ್ ನಲ್ಲಿ ಇರೋದರಿಂದ ನಾನು ಯಾವಾಗ ಈಡೇರುತ್ತೆ ಹೇಳೋಕೆ ಆಗಲ್ಲ.ಒಳ್ಳೆಯ ವಕೀಲರನ್ನ ಕೊಟ್ಟಿದ್ದಾರೆ .ಕೋರ್ಟ್ ನಿಂದ ಸ್ಟೇ ಇರೋದರಿಂದ ಇದು ಅನ್ವಯವಾಗಲ್ಲ .ಕೋರ್ಟ್ ಪರಿಶೀಲನೆ ಮಾಡಿ ಅಂತಾ ಹೇಳಿದ್ದಾರೆ.ನಿಮ್ಮ ಬೇಡಿಕೆ ಬಗೆಹಾರಿಸುತ್ತೇವೆ ಎಂದು ಸಚಿವ ಮಧುಬಂಗಾರಪ್ಪ ಭರವಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ