ಕಡಿಮೆ ಬೆಲೆಗೆ ಬಂಗಾರ; ಮಕ್ಮಲ್ ಟೋಪಿ ಹಾಕಿದ ಕಿಲಾಡಿ ಜೋಡಿ

ಭಾನುವಾರ, 26 ಮೇ 2019 (16:05 IST)
ಉದ್ದಿನ ಬೇಳೆ ಮಾರಾಟ ನೆಪದಲ್ಲಿ ಬಂದು ಚಿನ್ನಕ್ಕೆ ಕನ್ನ ಹಾಕಿರುವ ಘಟನೆ ನಡೆದಿದೆ.

ನಕಲಿ ಚಿನ್ನ ನೀಡಿ ಹಣ ಎಗರಿಸಿ ನಾಪತ್ತೆಯಾಗಿದ್ದಾರೆ ಕಿಲಾಡಿ ದಂಪತಿ. ಗದಗ ತಾಲೂಕಿನ ಹಿರೇಹಂದಿಗೋಳ ಗ್ರಾಮದಲ್ಲಿ ಘಟನೆ ನಡೆದಿದೆ.

ಹಣ ಕೊಟ್ಟು ಮೋಸಹೊದ ಮಹಿಳೆ ಈರಮ್ಮ ಕಣ್ಣೀರು ಹಾಕುತ್ತಿದ್ದಾರೆ.

ಜಮೀನು ಲಾವಣಿ ಮಾಡಲು ಬ್ಯಾಂಕ್ ನಿಂದ ತಂದ ಹಣ ನೀಡಿ ಮೋಸಹೋಗಿದ್ದಾರೆ‌ ಮಹಿಳೆ.
ನಕಲಿ ಬಂಗಾರಕ್ಕೆ 91 ಸಾವಿರ ಹಣ ಕೊಟ್ಟು ಕಂಗಾಲಾಗಿದ್ದಾರೆ ಕುಟುಂಬದವರು.

ಮಕ್ಕಳಿಗೆ ಕಿಡ್ನಿ ಸಮಸ್ಯೆ ಇದೆ. ಕಡಿಮೆ ಹಣದಲ್ಲಿ ಹತ್ತು ತೊಲೆ (100) ಗ್ರಾಮ ಚಿನ್ನ ನೀಡುವ ಆಸೆ ತೋರಿಸಿ ಮಕ್ಮಲ್ ಟೋಪಿ ಹಾಕಿ ಪರಾರಿಯಾಗಿದ್ದಾರೆ.

ಬಂಗಾರ ಪರೀಕ್ಷಿಸಿದ ಬಳಿಕ ನಕಲಿ ಅಂತ ಗೊತ್ತಾದ ಕೂಡಲೇ ಕುಟುಂಬಕ್ಕೆ ಶಾಕ್ ಹೊಡೆದಂತಾಗಿದೆ. ಕಡಿಮೆ ಹಣದಲ್ಲಿ 100  ಗ್ರಾಮ ಚಿನ್ನ ಬರುತ್ತೆ ಅಂತ ಹಣ ನೀಡಿ ಮೋಸ ಹೋದ ಮಹಿಳೆ ಈಗ ಚಿಂತೆಯಲ್ಲಿದ್ದಾಳೆ.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ