ರೈತನೊಬ್ಬನ ಮೇಲೆ ಜನಪ್ರತಿನಿಧಿ ದರ್ಪ ತೋರಿದ್ದು ಹೇಗೆ ಗೊತ್ತಾ?

ಮಂಗಳವಾರ, 26 ಫೆಬ್ರವರಿ 2019 (17:26 IST)
ಸಮಸ್ಯೆ ಹೇಳಲು ಬಂದ ರೈತರ ಮೇಲೆ ಜನಪ್ರತಿನಿಧಿಯೊಬ್ಬ ದರ್ಪ ತೋರಿರುವ ಘಟನೆ ನಡೆದಿದೆ.

ಬೀದರ್ ನ ಬಿಜೆಪಿ ಜಿಲ್ಲಾ ಪಂಚಾಯತ ಸದಸ್ಯ ಸುಧೀರ ಕಡಾಯಿಂದ ಕೇಸ್ ಹಾಕಿಸುತ್ತೇನೆ ಎಂದು ರೈತರಿಗೆ ಬೆದರಿಕೆ ಹಾಕಲಾಗಿದೆ.

ತಮ್ಮ ಸಮಸ್ಯೆ ಹೇಳಲು ಬಂದ ಜನತೆ ಮೇಲೆ ಕೇಸ್ ಹಾಕುತ್ತೇನೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅವಾಜ್ ಹಾಕಿದ್ದಾನೆ.
ಸಮಸ್ಯೆಯನ್ನು ಹೇಳಲು ಬಂದರೆ ಅವಾಜ್ ಹಾಕಿದ ಜಿಲ್ಲಾ ಪಂಚಾಯತ್ ಸದಸ್ಯನ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಹುಲಸೂರು ಜಿಲ್ಲಾ ಪಂಚಾಯತ ತೋಗಲುರ ಗ್ರಾಮಸಭೆಯಲ್ಲಿ ನಡೆದ ಘಟನೆ ಇದಾಗಿದೆ. ಜನಪ್ರತಿನಿಧಿ ಹಾಕಿರುವ ಬೆದರಿಕೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ