ಬೊಮ್ಮಾಯಿ ತೆಗೆದು ಯಡಿಯೂರಪ್ಪ ಸಿಎಂ ಮಾಡಿದ್ರೆ ಗೌರವ ಇರುತ್ತೆ- ಡಿಕೆಶಿ

ಮಂಗಳವಾರ, 28 ಫೆಬ್ರವರಿ 2023 (15:46 IST)
ಬಿಎಸ್ ವೈ ಬಗ್ಗೆ ಮೋದಿ ಹೊಗಳಿಕೆ ವಿಚಾರವಾಗಿ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.ಮೋದಿಯವರು ದೊಡ್ಡ ಕಲಾವಿದರು.ನಾವು ಕಲಾವಿದರನ್ನ ಸ್ಮರಣೆ ಮಾಡಿಕೊಳ್ತೇವೆ.ಪ್ರಧಾನಿ ಮೋದಿಯವರ ಬಗ್ಗೆ ಗೌರವವಿದೆ.ಲಪ್ರಧಾನಿ ಮೋದಿಯವರೇ ಹೇಳಬೇಕು.ಯಡಿಯೂರಪ್ಪರಿಗೆ ಕೊಟ್ಟ ನೋವು,ಕಣ್ಣೀರಿನ‌ ಬಗ್ಗೆ ವಿಧಾನಸೌಧದಿಂದ ರಾಜಭವನಕ್ಕೆ ತೆರಳುವಾಗ ಕಣ್ಣೀರಾಕಿದ್ರು.ಅದರ ಬಗ್ಗೆ ಅವರು ಉತ್ತರ ಕೊಡಲಿ.ಅವರ ಕುಟುಂಬ, ಸ್ನೇಹಿತರಿಗೆ ಐಟಿ ರೇಡ್ ಆಯ್ತು.ಇಡಿ ಸಮನ್ಸ್ ಆಯ್ತಲ್ಲ ಅದೆಲ್ಲ ಏನದು ಹೇಳಬೇಕು.ರಾಜ್ಯದ, ರಾಷ್ಟ್ರದ ಜನತೆಗೆ ಇದರ ಬಗ್ಗೆ ಹೇಳಬೇಕು.ಎಷ್ಟು ಬಾರಿ  ಅಧಿಕಾರಿಗಳನ್ನ ಕರೆಸಿಕೊಂಡಿದ್ರು.ಎಲ್ಲವೂ ಏನೇನಾಯ್ತು ಜನರ ಮುಂದೆ ಇಡಿ ಎಂದು ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
 
ಅಲ್ಲದೇ ಯಡಿಯೂರಪ್ಪ ಯಾಕೆ ಕಣ್ಣೀರು ಹಾಕಿದ್ರು?ಅವರನ್ನ ಯಾಕೆ ಸಿಎಂ ಸ್ಥಾನದಿಂದ ಇಳಿಸಿದ್ರು.ಯಾಕೆ ಇಳಿಸಿದ್ರಿ ಹೇಳಿ ಸ್ವಾಮಿ.ಅವರ ನಾಯಕತ್ವದಲ್ಲಿ ಸರ್ಕಾರ ಮಾಡಿದ್ರು.ಯಾಕೆ ಅವರನ್ನ ಇಳಿಸಿದ್ರಿ ಜನತೆಗೆ ಹೇಳಬೇಕು.ಆಪರೇಷನ್ ಮಾಡಲು ಅವರು ಬೇಕಿತ್ತು.ಸರ್ಕಾರ ಮಾಡೋಕೆ ಅವರು ಬೇಕಿತ್ತು.ಯಾಕೆ ಅವರನ್ನ ವಜಾ ಮಾಡಿದ್ರು ಉತ್ತರ ಕೊಡಲಿ.ಈಗ ಸರ್ಕಾರಕ್ಕೆ ಅಭದ್ರತೆ ಇದೆ ಎಂದು ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
 
ಅಲ್ಲದೇ ಯಡಿಯೂರಪ್ಪನವರನ್ನ ಇದೇ ವಿಷಯಕ್ಕೆ ಹೊಗಳುತ್ತಿದ್ದಾರೆ.ಅವರ ನಾಯಕತ್ವದಲ್ಲೇ ಚುನಾವಣೆಗೆ ‌ಮಾಡ್ತೇವೆಂದು ಹೇಳಿ.ಬೊಮ್ಮಾಯಿ ತೆಗೆದು ಯಡಿಯೂರಪ್ಪ ಸಿಎಂ ಮಾಡಿದ್ರೆ ಗೌರವ ಇರುತ್ತೆ.ಯಡಿಯೂರಪ್ಪ ನಾಯಕತ್ವದಲ್ಲಿ ಹೋಗಿ .ಕೇವಲ ಲಿಪ್ ಸಿಂಪತಿ ಮಾಡೋದು ಬೇಡ ಎಂದು ಡಿ ಕೆ ಶಿವಕುಮಾರ್ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ