ಕಳಸಾ ಬಂಡೂರಿ ತೀರ್ಪು 20ಕ್ಕೆ: ಹೋರಾಟಗಾರರ ಮಹತ್ವದ ಸಭೆ

ಗುರುವಾರ, 9 ಆಗಸ್ಟ್ 2018 (14:14 IST)
ಕಳಸಾ ಬಂಡೂರಿ ಮತ್ತು  ಮಹಾದಾಯಿ ತೀರ್ಪು ಆ. 20 ಆಗಮಿಸುವ ಹಿನ್ನೆಲೆಯಲ್ಲಿ ಕಳಸಾ ಬಂಡೂರಿ ಹೋರಾಟಗಾರರು ಮಹತ್ವದ ಸಭೆ ನಡೆಸಿದರು.
ಹುಬ್ಬಳ್ಳಿ ನಗರದ ಪ್ರವಾಸಿ ಮಂದಿರಲ್ಲಿ ಸಭೆ ನಡೆಸಿದ ಹೋರಾಟಗಾರರ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ತಗೆದುಕೊಳ್ಳಲಾಯಿತು.

ಕಳಸಾ ಬಂಡೂರಿ ಹೋರಾಟಗಾರರೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಮನಸ್ತಾಪ ಮಾಡಿಕೊಳ್ಳದೆ, ಎಲ್ಲರೂ ಸೇರಿ ಹೋರಾಟ ಮಾಡಿದರೆ ಮಾತ್ರ ಸಮಸ್ಯೆ ಬಗೆಹರಿಯುತ್ತದೆ. ಇಲ್ಲವಾದ್ರೆ ನಮ್ಮಲ್ಲಿನ ಒಡಕನ್ನು ಇಟ್ಟುಕೊಂಡು ರಾಜಕಾರಣಿಗಳು ಆಟ ಆಡುತ್ತಾರೆ. ಅದಕ್ಕೆ ಸಂಘಟನೆಗಳಲ್ಲಿ ಒಡಕು ಮೂಡದಂತೆ ಎಲ್ಲರೂ ಒಂದಾಗಿ ಹೋರಾಟ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಇದೇ ಆ. 16 ಕ್ಕೆ ಹುಬ್ಬಳ್ಳಿಯಲ್ಲಿ ಕಳಸಾ ಬಂಡೂರಿ, ಮಹಾದಾಯಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.‌ ಆ. 20 ಕ್ಕೆ ಮಹತ್ವದ ಅಂತಿಮ ತೀರ್ಪು ಹೊರಬೀಳಲಿದ್ದು, ವಿರುದ್ಧವಾಗಿ ತೀರ್ಪು ಬಂದ್ರೆ ಉಗ್ರವಾದ ಹೋರಾಟ ಮಾಡಲು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ