ಕಸ್ತೂರಿ ರಂಗನ್ ವರದಿ: ಸುಪ್ರೀಂ ಕೋರ್ಟಗೆ ಸರಕಾರ ವರದಿ ಸಲ್ಲಿಸಲಿ

ಭಾನುವಾರ, 12 ಆಗಸ್ಟ್ 2018 (15:01 IST)
ಕಸ್ತೂರಿ ರಂಗನ್ ವರದಿ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಲು ಆಗಸ್ಟ್  25 ಕೊನೆಯ ದಿನವಾಗಿದೆ. ಆದರೂ ಈಗಲೂ ರಾಜ್ಯ ಸರಕಾರ ಇನ್ನೂ ನಿದ್ದೆಯಲಿದೆ ಎಂದು ಬಿಜೆಪಿ ಶಾಸಕ ದೂರಿದ್ದಾರೆ.

ಕಸ್ತೂರಿ ರಂಗನ್ ವರದಿ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಲು ಆಗಸ್ಟ್  25 ಕೊನೆಯ ದಿನವಾಗಿದೆ. ಆದರೂ ಈಗಲೂ ರಾಜ್ಯ ಸರಕಾರ ಇನ್ನೂ ನಿದ್ದೆಯಲಿದೆ. ರಾಜ್ಯ ಸರಕಾರ ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ವಸ್ತು ನಿಷ್ಠ   ವರದಿ ನೀಡಬೇಕು ಎಂದು  ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಗ್ರಹಿಸಿದ್ದಾರೆ. ಸರಕಾರ ನಿರ್ಲಕ್ಷ್ಯ ವಹಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯ 44 ಗ್ರಾಮಗಳ ಜನತೆ ಇದರಿಂದ ತೊಂದರೆಗೆ ಒಳಗಾಗುತ್ತಾರೆ. ಹೀಗಾಗಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಆಗಸ್ಟ್ 17 ರಂದು ಬೆಳ್ತಂಗಡಿ ಯಲ್ಲಿ ಬ್ರಹತ್ ಸಭೆ ಕರೆಯಲಾಗಿದೆ. ಸಾವಿರಾರು ಜನತೆ ಜನ ಪ್ರತಿನಿಧಿಗಳು  ಭಾಗವಹಿಸಲಿದ್ದಾರೆ ಎಂದರು.

ಕೇರಳ ರಾಜ್ಯ ಈಗಾಗಲೇ ಸುಪ್ರೀಂ ಕೋರ್ಟ್ ಗೆ ವಸ್ತು ನಿಷ್ಠ ವರದಿ ನೀಡಿದೆ. ಹಾಗಾಗಿ ರಾಜ್ಯ ಸರಕಾರ ಕೂಡಲೇ ತನ್ನ ವರದಿ ಸಲ್ಲಿಸಬೇಕೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ