ನಾನು ಸಿಎಂ ಆದಾಗ ವರ್ಗಾವಣೆಗೆ ಹಣ ಕೊಟ್ಟಿದ್ದೆ ಅಂತ ಒಬ್ಬ ಅಧಿಕಾರಿ ಹೇಳಲಿ ನಾನು ರಾಜಕೀಯ ನಿವೃತ್ತಿ ಹೊಂದುತ್ತೆನೆ-ಹೆಚ್ ಡಿ ಕೆ

ಶನಿವಾರ, 10 ಜೂನ್ 2023 (15:39 IST)
ಈ ಸರ್ಕಾರದಲ್ಲಿ ಪ್ರಾರಂಭಿಕ ಹಂತದ ಅಧಿಕಾರಿಗಳ ಸಭೆ ನಡೆದಿದೆ.ಆ ಸಭೆಯಲ್ಲಿ ಅಧಿಕಾರಿಗಳಿಗೆ ಯಾವ ರೀತಿ ಪಾಠ ಮಾಡಿದ್ದಾರೆ ಇವರು,ಸಿಎಂ ಹಾಗೂ ಡಿಸಿಎಂ ಅವರು ಒಂದಿಷ್ಟು ಸೂಚನೆ ಕೊಟ್ಟಿದ್ದಾರೆ.ನಾವು ಹೇಳಿದಂತೆ ಕೇಳಬೇಕು ಅನ್ನೋ ಮಾತು ಹೇಳಿದ್ದಾರೆ.ಬಿಜೆಪಿ ಬಗ್ಗೆ 40 ಪರ್ಸೆಂಟ್ ಬಗ್ಗೆ ಮಾತಾಡಿದರು ಇವರು,ತಮಟೆ ಹೊಟ್ಕೊಂಡು ಮಾತಾಡಿದ್ರು.ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ದಂಧೆ ಶುರುವಾಗಿದೆ ಅಂದ್ರು.ಆದರೆ ಇದನ್ನೆಲ್ಲಾ ಫ್ರೂವ್ ಮಾಡೋಕೆ ಆಗಲ್ಲ ಅಂತಾ ಕಾಂಗ್ರೆಸ್ ವಿರುದ್ಧ ಹೆಚ್ ಡಿ ಕೆ ಹರಿಹಾಯ್ದಿದ್ದಾರೆ.
 
ಸರ್ಕಾರ ಬಂದಿದ್ಯಲ್ಲಾ 40 ಪರ್ಸೆಂಟ್ ಸತ್ಯಾಂಶ ಹೊರಗಿಡ್ತಾರಾ?ಪ್ರಾರಂಭಿಕ ಹಂತದಲ್ಲಿ ಇವರು ಒಂದಿಷ್ಟು ನಿರ್ಧಾರ ತೆಗೆದುಕೊಂಡರು.ಟೆಂಡರ್ ಸೇರಿದಂತೆ ಅನೇಕ ಅನುದಾನ ತಡೆ ಹಿಡಿದರು .೬೦೦ ಕೋಟಿ ಹಣದಷ್ಟು ವರ್ಕ್ ಆರ್ಡರ್ ಗೆ ಕೊಟ್ಟಿದ್ದರು.ಮೇ ಆರರಂದು 675 ಕೋಟಿ ಗುತ್ತಿಗೆದಾರರಿಗೆ, ಕೆಲಸ ಮಾಡಿರುವವರಿಗೆ ಎಲ್ ಒಸಿ ರಿಲೀಸ್ ಆಯ್ತು,ಆ ಸಂಧರ್ಭದಲ್ಲಿ ಒಬ್ಬ ಕಾಂಗ್ರೆಸ್ ಎಂಪಿ ಹೇಳಿದ್ರಂತೆ_ಯಾವುದೇ ಹಣ ಬಿಡುಗಡೆ ಮಾಡಬೇಡಿ ಅಂತ ಹಣ ಕೊಡೋದನ್ನ ನಿಲ್ಲಿಸಿದ್ರಂತೆ,ಯಾರಿಗೂ ಹಣ ರಿಲೀಸ್ ಮಾಡಬೇಡಿ, ನಮ್ಮ ಸರ್ಕಾರ ಬರುತ್ತದೆ ಅಂತ ಹೇಳಿದ್ರಂತೆ,675 ಕೋಟಿ ಎಲ್ ಒಸಿ ಹಣ ಯಾಕೆ ಬಿಡುಗಡೆ ಆಗಲಿಲ್ಲ.ಈಗ ಹಣ ಬಿಡುಗಡೆ ಆಗಬೇಕು ಅಂದ್ರೆ 5 ಪರ್ಸೆಂಟ್ ಡಿಮ್ಯಾಂಡ್ ಇಟ್ಟಿದ್ದಾರಂತೆ,40 ಪರ್ಸೆಂಟ್ ಜೊತೆ 5 ಪರ್ಸೆಂಟ್ ಕೊಟ್ರೆ ಹಣ ಬಿಡುಗಡೆ ಮಾಡ್ತೀವಿ ಅಂತ ಹೇಳಿದ್ದಾರಂತೆ ಹಾಗಾದ್ರೆ ಎಲ್ಲಿ ಏನಾಗಿದೆ ಅಂತ ಹೇಳಬೇಕಲಾ..?ಕೆಲಸ ಮಾಡಿರೋ ಕಾಮಗಾರಿಗೆ ೫ ಪರ್ಸೆಂಟ್ ಕೇಳ್ತಾ ಇದ್ದೀರಲಾ, ನೀವು ಯಾವ ಹರಿಶ್ಚಂದ್ರರು .ನನ್ನ ಬಗ್ಗೆ ಲಘುವಾಗಿ ಮಾತಾನಾಡೋದನ್ನ ನಿಲ್ಲಿಸಿ ಎಂದು ಹೇಳಿದ್ರು.
 
ಇನ್ನೂ ನಾನು ಸಿಎಂ ಆದಾಗ ವರ್ಗಾವಣೆಗೆ ಹಣ ಕೊಟ್ಟಿದ್ದೆ ಅಂತ ಒಬ್ಬ ಅಧಿಕಾರಿ ಹೇಳಲಿ ನಾನು ರಾಜಕೀಯ ನಿವೃತ್ತಿ ಹೊಂದುತ್ತೆನೆ.ಕಾಂಗ್ರೆಸ್ ಜೊತೆ ಸರ್ಕಾರ ಇದ್ದಾಗ ಇವರು ಹೇಳಿದ ಮೇಲೆ ವರ್ಗಾವಣೆ ಮಾಡಬೇಕು ಅಂತ ಪರಿಸ್ಥಿತಿ ಇತ್ತು.ನಾನು ಅಮೇರಿಕಾದಲ್ಲಿ ಇದ್ದಾಗ ಒಂದಿಷ್ಟು ಜನ ಮುನಿಸಿಕೊಂಡ್ರಲಾ  ಆಗ ಏನಾಯ್ತು..?ಕಾಂಗ್ರೆಸ್ ನ ಒಬ್ಬ ಮಂತ್ರಿ ಸೋಪ್ ಅಂಡ್ ಡಿಟರ್ಜಂಟ್ ಮಂಡಳಿಗೆ ಅಧಿಕಾರಿ ಒಬ್ಬರನ್ನ ಹಾಕಿದ್ರು.ಅಲ್ಲಿ ಅಸಮಾಧಾನ ಆಯ್ತು  ಆಗಲೇ ತಾನೆ ಸರ್ಕಾರ ಬಿದ್ದಿದ್ದು.ಸಿಎಂ ಅವರೇ ಒಬ್ಬ ಅಧಿಕಾರಿ ವರ್ಗಾವಣೆ ಮಾಡಿದ್ದಾರೆ.ಅದಕ್ಕೆ ಸಂಬಂಧಪಟ್ಟ ಮಂತ್ರಿ ವಿದೇಶದಲ್ಲಿ ಇದ್ದಾರೆ.ಸಿಎಂ ಆದೇಶ ಮಾಡಿದರೂ ಮಂತ್ರಿ ಹೇಳಿದ್ದಾರಂತೆ ಅಧಿಕಾರ ತೆಗೆದುಕೊಳ್ಳಬೇಡಿ ಅಂತಾ ಹಾಗಾದ್ರೆ ಎಷ್ಟು ಹಣ ಕೊಟ್ಟು ಬಂದ್ರು ಈ ಅಧಿಕಾರಿ.ಈಗ ಜ್ಯೋತಿ ಕಾರ್ಯಕ್ರಮ ನಡೆಯುತ್ತಿದೆ.ಈ ದಂಧೆ ಬಗ್ಗೆ ಏನು ಹೇಳ್ತಾರೆ ಇವರು,ಇನ್ನೊಬ್ಬ ಅಧಿಕಾರಿಯನ್ನ ಸಿಎಂ ಕಚೇರಿಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಹೆಚ್ ಡಿ ಕೆ ವಾಗ್ದಾಳಿ ನಡೆಸಿದ್ದಾರೆ
 
ಇನ್ನೂ ಹಿಂದಿನ ಸರ್ಕಾರದ ಹಗರಣ ತನಿಖೆ ವಿಚಾರವಾಗಿ ತನಿಖೆ ಮಾಡಲಿ ಯಾರು ಬೇಡ ಅಂದ್ರು,ಜನರ ಸಮಸ್ಯೆ ಬಗ್ಗೆ ಚಿಂತನೆ ಮಾಡಿ ಜನಪರ ಕೆಲಸ ಮಾಡಬೇಕು.ಆದರೆ ಈ ಸರ್ಕಾರ ಅದನ್ನ ಮಾಡ್ತಾ ಇಲ್ಲ.ಹಿಂದಿನ ಅಕ್ರಮಗಳನ್ನು ತನಿಖೆ ಮಾಡುವ ಸರ್ಕಾರ ಇದು,ಅವರಿಗೆ ಲ್ಯಾಂಡ್ ಕೊಟ್ರು ಅಂತರಲಾ ಇವರ ಅಧಿಕಾರ ಇದ್ದಾಗ ಯಾರಿಗೆ ಲ್ಯಾಂಡ್ ಕೊಟ್ರು .ಹಿಂದೆ ಬಿಜೆಪಿ ಬಿ ಟೀಂ ಜೆಡಿ ಎಸ್ ಅಂದ್ರಲಾ.ಈಗ ಯಾರು ಯಾವ ಟೀಂ ಅಂತ ಹೇಳಿ.135 ಗೆಲ್ಲೋಕೆ ಯಾರು ಯಾರ ಜೊತೆ ಮೈತ್ರಿ ಮಾಡ್ಕೊಂಡ್ರಿ.ಜೆಡಿಎಸ್ ಗೆ ಮತ ಹಾಕಿದ್ರೆ ಎಟಿಎಂ ಅಂದ್ರಲಾ.ಈ ಎರಡು ಪಕ್ಷಗಳು ನಮ್ಮ ರಾಜ್ಯದ ಸಂಪತ್ತು ಲೂಟಿ ಮಾಡುವ ಎಟಿಎಂ ಗಳೇ ,ಬೈರತಿ ಬಸವರಾಜ್ ಅಧಿಕಾರಿ ನೇಮಕ ಮಾಡುವ ವಿಚಾರದಲ್ಲಿ ಮುನಿಸಿಕೊಂಡ್ರು ಅದು ಕೂಡ ಸಮ್ಮಿಶ್ರ ಸರ್ಕಾರ ಬೀಳೋಕೆ ಕಾರಣವಾಯ್ತು ಅಂತಾ ಹೆಚ್ ಡಿ ಕೆ ಹೇಳಿದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ