ಗೃಹ ಸಚಿವ ಅರಗ ಜ್ಞಾನೇಂದ್ರ ಹೆಸರು ಬಳಸಿ ಪಂಗನಾಮ

ಶುಕ್ರವಾರ, 5 ನವೆಂಬರ್ 2021 (10:04 IST)
ಬೆಂಗಳೂರು: ಗೃಹ ಸಚಿವ ಅರಗ ಜ್ಞಾನೇಂದ್ರ ಆಪ್ತನೆಂದು ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಭವಾನಿ ರಾಜ್ ಮೋರೆ ಎಂಬಾತ ಬಂಧಿತ. ಈತ ಕರ್ನಾಟಕ ಬಾರ್ ಆಂಡ್ ರೆಸ್ಟೋರೆಂಡ್ ಓನರ್ಸ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಸುರೇಶ್ ಎಂಬವರಿಂದ 25 ಪಡೆದು ವಂಚನೆ ಮಾಡಿದ್ದ.

ತಾನು ಶಿವಮೊಗ್ಗದ ಮೂಲದ ಬಿಜೆಪಿ ಮುಖಂಡ, ಅರಗ ಜ್ಞಾನೇಂದ್ರ ಆಪ್ತ. ನಿಮಗೆ ಪೊಲೀಸರು ಕಿರುಕುಳ ಕೊಡುತ್ತಿದ್ದಾರಲ್ವಾ ಅದಕ್ಕೆ ನಾನು ಸಹಾಯ ಮಾಡುವುದಾಗಿ 1.25 ಕೋಟಿ ರೂ.ಗೆ ಡಿಮ್ಯಾಂಡ್ ಮಾಡಿದ್ದ. ಆತನ ಮಾತು ನಂಬಿ ತಮ್ಮ ಅಸೋಸಿಯೇಟ್ ಜೊತೆ ಮಾತನಾಡಿ 1.25 ಕೋಟಿ ರೂ. ಸಂಗ್ರಹಿಸಿ ಕೊಟ್ಟಿದ್ದಾರೆ. ಆದರೆ ದಿನ ಕಳೆದರೂ ಆರೋಪಿಯ ಪತ್ತೆಯಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ 1 ಕೋಟಿ ರೂ. ಮರಳಿಸಿದ್ದು, ಉಳಿದ 25 ಲಕ್ಷ ಕೊಟ್ಟಿರಲಿಲ್ಲ. ಹೀಗಾಗಿ ಸುರೇಶ್ ಪೊಲೀಸರಿಗೆ ದೂರು ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ