ಲಾಕ್ ಡೌನ್ ಮುಂದುವರಿಯುತ್ತದೆ ಎಂದ ಸಚಿವ

ಸೋಮವಾರ, 6 ಏಪ್ರಿಲ್ 2020 (17:43 IST)
ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್  ತನ್ನ ಬಾಹುಗಳನ್ನು ಚಾಚುತ್ತಿರೋ ಸಂದರ್ಭದಲ್ಲಿ ಲಾಕ್ ಡೌನ್ ಮುಂದುವರಿಸಲು ಚಿಂತನೆ ನಡೆದಿದೆ ಅಂತ ಸಚಿವರೊಬ್ಬರು ಹೇಳಿದ್ದಾರೆ.
 

ರಾಜ್ಯದ ಕೆಲವು ಜಿಲ್ಲೆಗಳನ್ನು ಕೋವಿಡ್ – 19 ಕೇಸ್ ಗಳು ಹೆಚ್ಚಿರುವುದರಿಂದಾಗಿ ರೆಡ್ ಝೋನ್ ಎಂದು ಗುರುತಿಸಲಾಗಿದೆ. ಹೀಗೆ ಗುರುತಿಸಲಾದ ರೆಡ್ ಝೋನ್ ಗಳಲ್ಲಿ ಲಾಕ್ ಡೌನ್ ಇನ್ನೂ ಒಂದಷ್ಟು ದಿನಗಳ ಕಾಲ ಮುಂದುವರಿಸಲು ಚಿಂತನೆ ನಡೆಯುತ್ತಿದೆ. ಹೀಗಂತ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
 

ರಾಜ್ಯದ ಬೀದರ್, ಮಂಗಳೂರು, ಮೈಸೂರು, ಬೆಂಗಳೂರು, ನಂಜನಗೂಡು, ಗೌರಿಬಿದನೂರು ರೆಡ್ ಝೋನ್ ನಲ್ಲಿವೆ. ರೆಡ್ ಝೋನ್ ನಲ್ಲಿ ಕೋವಿಡ್ – 19 ನಿಯಂತ್ರಣಕ್ಕೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ