ಪಿಪಿಇ ಕಿಟ್ ಧರಿಸದೆ ಕೊರೊನಾ ಸೋಂಕಿತನ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಶಾಸಕ ಖಾದರ್

ಬುಧವಾರ, 24 ಜೂನ್ 2020 (09:15 IST)
Normal 0 false false false EN-US X-NONE X-NONE

ಮಂಗಳೂರು : ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಗೆ ಕೊರೊನಾ ವೈರಸ್ ಭಯವೇ ಇಲ್ವ? ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ.

ಹೌದು. ಇದಕ್ಕೆ ಕಾರಣವೇನೆಂದರೆ ನಿನ್ನೆ ಕೊರೊನಾದಿಂದ ವೃದ್ದರೊಬ್ಬರು ಸಾವನಪ್ಪಿದ್ದು , ಆ ಸೋಂಕಿತನ ಅಂತ್ಯಕ್ರಿಯೆಯಲ್ಲಿ ಖಾದರ್ ಭಾಗಿಯಾಗಿದ್ದರು. ಆ ವೇಳೆ ಅವರು ಪಿಪಿಇ ಕಿಟ್ ಧರಿಸಲಿಲ್ಲ  ಎಂಬ ಆರೋಪ ಕೇಳಿಬಂದಿದೆ.

ಅಲ್ಲದೇ ಖಬರ್ ಸ್ತಾನ್ ಭೂಮಿಯಲ್ಲಿ ಗುಂಡಿ ಅಗೆದ ಶಾಸಕ ಖಾದರ್ ಮೃತದೇಹ ಗುಂಡಿಯಲ್ಲಿಟ್ಟು ಮಣ್ಣು ಮುಚ್ಚಿದ್ದಾರೆ. ಆರೋಗ್ಯ ಸಿಬ್ಬಂದಿಗಳು ಪಿಪಿಇ ಕಿಟ್ ಧರಿಸಿದ್ದರೂ ಕೂಡ ಶಾಸಕರು ಧರಿಸಿರಲಿಲ್ಲ. ನಿಯಮ ಪಾಲಿಸದೆ ಶಾಸಕ ಖಾದರ್ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ