Nelamangala Fire accident: ಹೊತ್ತಿ ಉರಿದ ಎಣ್ಣೆ ಗೋದಾಮು ವಿಡಿಯೋ
ನೆಲಮಂಗಲ ತಾಲೂಕಿನ ಅಡಕಮಾರನಹಳ್ಳಿ ಬಳಿಯ ಆಯಿಲ್ ಗೋಡೌನ್ ಇದಾಗಿದೆ. ಸುಮಾರು 40 ಸಾವಿರ ಚದರ ಅಡಿಯಷ್ಟು ವಿಶಾಲವಾಗಿರುವ ಗೋಡೌನ್ ನಲ್ಲಿ ಅಗ್ನಿ ಅನಾಹಿತ ಸಂಭವಿಸಿದೆ. ಪರಿಣಾಮ ಬೆಂಕಿಯ ಕೆನ್ನಾಲಗೆ ಬೃಹತದಾಕಾರವಾಗಿ ವ್ಯಾಪಿಸಿದೆ.
ಮಾಜಿ ಸಚಿವ ಎಚ್ ಸಿ ಶ್ರೀಕಂಠಯ್ಯ ಅಳಿಯ ಕೃಷ್ಣಪ್ಪ ಎಂಬವರಿಗೆ ಸೇರಿದ ಗೋಡೌನ್ ಇದಾಗಿದೆ. ಘಟನೆಯಲ್ಲಿ ಸುಮಾರು 30 ಕೋಟಿ ರೂ. ಮೌಲ್ಯದ ವಸ್ತು ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ.
ತಕ್ಷಣವೇ ಸ್ಥಳಕ್ಕೆ ಅಗ್ನಿ ಶಾಮಕ ಪಡೆ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದೆ. ಗೋಡೌನ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಎಣ್ಣೆ ಸಂಗ್ರಹಿಸಿಡಲಾಗಿತ್ತು. ಬೆಂಕಿ ಅನಾಹುತಕ್ಕೆ ಕಾರಣವೇನೆಂದು ತಿಳಿದುಬರಬೇಕಿದೆ.