ಸಿದ್ದರಾಮಯ್ಯ ಬರ್ತಾರೆಂದು ಮೆಟ್ರೋ ನಿಲ್ದಾಣ ಕ್ಲೀನಿಂಗ್: ದಿನಕ್ಕೊಂದು ಕಡೆ ಪಾದ ಬೆಳೆಸಿ ಸಾರ್ ಎಂದ ನೆಟ್ಟಿಗರು
ಇದಕ್ಕೆ ನೆಟ್ಟಿಗರು ಲೇವಡಿ ಮಾಡಿದ್ದಾರೆ. ಪ್ರತಿನಿತ್ಯ ಸಿಎಂ ಸಾಹೇಬರು ಹೀಗೆ ಒಂದೊಂದು ಕಡೆಗೆ ಹೋಗುತ್ತಿದ್ದರೆ ಆ ಭಾಗವೆಲ್ಲಾ ಸ್ವಚ್ಛವಾಗುತ್ತದೆ ಎಂದಿದ್ದಾರೆ. ಇನ್ನೊಂದೆಡೆ ಸಿಎಂಗಾಗಿ ರೆಡ್ ಕಾರ್ಪೆಟ್ ಹಾಕಲಾಗಿತ್ತು. ಇದೂ ಭಾರೀ ಟೀಕೆಗೆ ಗುರಿಯಾಗಿದೆ. ಮಳೆಗೆ ಜನ ಸಾಯತ್ತಿದ್ದರೆ ನಿಮಗೆ ರೆಡ್ ಕಾರ್ಪೆಟ್ ಶೋಕಿ ಬೇಕಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.