ಪದ್ಮನಾಭನಗರ ಕಾಂಗ್ರೆಸ್‌ ಟಿಕೆಟ್​ ಫೈಟ್​​

ಶುಕ್ರವಾರ, 31 ಮಾರ್ಚ್ 2023 (20:15 IST)
ಬೆಂಗಳೂರಿನ ಪದ್ಮನಾಭನಗರ ಕಾಂಗ್ರೆಸ್‌ ಅಭ್ಯರ್ಥಿ ರೇಸ್‌ನಲ್ಲಿ ಸಿಂಧ್ಯಾ ಹೆಸರು ಕೇಳಿ ಬಂದಿದ್ದು, ಸ್ಕ್ರೀನಿಂಗ್ ಕಮಿಟಿಯಲ್ಲಿ ಸಿಂಧ್ಯಾ ಹೆಸರು ಕೇಳಿ ಬರುತ್ತಿದ್ದಂತೆ ಆಕ್ರೋಶ ಭುಗಿಲೆದ್ದಿದೆ. ಯುವ ಮುಖಂಡ ಸಂಜಯ್‌ಗೌಡ ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿದೆ.. ಒಕ್ಕಲಿಗ ಮುಖಂಡ ಸಂಜಯ್‌ಗೌಡ ಕಣಕ್ಕಿಳಿಸಲು ಪ್ಲ್ಯಾನ್‌ ನಡೆದಿತ್ತು.. ಕಳೆದ ಮೂರು ವರ್ಷಗಳಿಂದ ಸಂಜಯ್‌ಗೌಡ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು.. ಕೊನೆ ಕ್ಷಣದಲ್ಲಿ ಮಾಜಿ ಸಚಿವ ಸಿಂಧ್ಯಾ ಹೆಸರು ಎಳೆದು ತಂದಿದ್ದಕ್ಕೆ ಆಕ್ರೋಶ ಭುಗಿಲೆದ್ದಿದೆ. ನಿನ್ನೆ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲೂ ಈ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. 2021ರಲ್ಲಿ JDS ತೊರೆದು PGR ಸಿಂಧ್ಯಾ ಕಾಂಗ್ರೆಸ್ ಸೇರಿದ್ದರು. ಮರಾಠ ಸಮುದಾಯದ PGR ಸಿಂಧ್ಯಾಗಿಂತ ಸಂಜಯ್‌ಗೌಡ ಬೆಸ್ಟ್‌ ಎಂದು ಮತದಾರರು ಹೇಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ