ಪಕ್ಷ ಸೇರ್ಪಡೆ ಕಾರ್ಯಕ್ರಮ

ಸೋಮವಾರ, 13 ಮಾರ್ಚ್ 2023 (20:38 IST)
ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಮುಂದಾಗಿರುವ ಕಾಂಗ್ರೆಸ್ ನಾಯಕರು ಇಂದು ಮದ್ದೂರಿನ ಉದಯ್ ಗೌಡನನ್ನ ಕಾಂಗ್ರೆಸ್ ಸೇರ್ಪಡೆ ಮಾಡಿಕೊಂಡಿದೆ.ಕೆಪಿಸಿಸಿಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಪಕ್ಷದ ಭಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.ನಂತರ ಮಾತನಾಡಿದ ಡಿಕೆಶಿವಕುಮಾರ್ ಮದ್ದೂರು ಬಹಳ ದೊಡ್ಡ. ಎಸ್ಎಂಕೆ, ಮಾದೇಗೌಡ ಸೇರಿದಂತೆ ಹಿರಿಯರನ್ನು ಕೊಟ್ಟ ಕ್ಷೇತ್ರ. ರೈತರು ಬಹಳ ಪ್ರಜ್ಞಾವಂತರಾಗಿರುವ ಕ್ಷೇತ್ರ. ನಮ್ಮದೇ ಕೆಲ ತಪ್ಪುಗಳಿಂದ ಕ್ಷೇತ್ರ ಕಳೆದುಕೊಂಡಿದ್ದೆವು.ನಾಯಕರೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡಲು ನಿರ್ಧಾರ ಮಾಡಿದ್ದೇವೆ. ಉದಯ್ ಗೌಡ ಮದ್ದೂರಿನಲ್ಲಿ ಸ್ವಂತ ಶಕ್ತಿ ಬೆಳೆಸಿಕೊಂಡಿದ್ದಾರೆ. ಒಂದೇ ಉದ್ದೇಶ: ಜೆಡಿಎಸ್ ಅನ್ನು ತಮ್ಮಣ್ಣ ಅವರನ್ನು ಸೋಲಿಸಬೇಕಿದೆ ಎಂದು ಹೇಳಿದರು.ಇನ್ನೂ ಪ್ರಧಾನಿ ಗಳು ನಿನ್ನೇ ಮಂಡ್ಯಕ್ಕೆ ಬಂದ ವೇಳೆ ಜನತಾ ದಳದ ಸುದ್ದಿಗೆ ಹೋಗಲಿಲ್ಲ. ಇಂದರಿಂದ ಗೊತ್ತಾಗುತ್ತೆ ಮಂಡ್ಯ ಭಾಗದಲ್ಲಿ ಕಾಂಗ್ರೆಸ್ ಪೈಟ್ ಕೊಡುತ್ತೆ ಅಂತಾ ಪ್ರಧಾನಿಳು ಸಂದೇಶ ಕೊಟ್ಟಿದ್ದಾರೆ ಎಂದು  ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ