ಅಂಗನವಾಡಿಗೆ ಕಳಪೆ ಆಹಾರಧಾನ್ಯ ಪೂರೈಕೆ: ಗ್ರಾಮಸ್ಥರು ಮಾಡಿದ್ದೇನು?

ಶುಕ್ರವಾರ, 1 ಫೆಬ್ರವರಿ 2019 (19:51 IST)
ಕಳಪೆ ಆಹಾರಧಾನ್ಯವನ್ನು ಅಂಗನವಾಡಿಗೆ ಪೂರೈಕೆ ಮಾಡುತ್ತಿದ್ದ ಕ್ರಮದ ವಿರುದ್ಧ ಗ್ರಾಮಸ್ಥರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದಾರೆ.  

ಆಹಾರ ಧಾನ್ಯ ಪೂರೈಕೆ ಮಾಡುತ್ತಿದ್ದ ವಾಹನ ಹಾಗೂ ಮಾಲೀಕನಿಗೆ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಆಹಾರ ಧಾನ್ಯ ಸಮೇತ ವಾಹನ ವಶಕ್ಕೆ ಪಡೆದು ಪ್ರತಿಭಟನೆ ನಡೆಸಿದರು.

ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಹಾವೇರಿ ಜಿಲ್ಲಾಧಿಕಾರಿ ಬರುವಂತೆ ಗ್ರಾಮಸ್ಥರ ಪಟ್ಟು ಹಿಡಿದ ಘಟನೆಯೂ ನಡೆಯಿತು.

ಹುಳು ತುಂಬಿದ ಕಡಲೆ, ಬೇಳೆ ಸೇರಿ ಇತರ ಧಾನ್ಯಗಳು ವಶಕ್ಕೆ ಪಡೆದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ