'ಪ್ರಯತ್ನ ಪಟ್ಟರೆ ಪುನಶ್ಚೇತನ ಮಾಡಬಹುದು'

ಶನಿವಾರ, 23 ಏಪ್ರಿಲ್ 2022 (20:28 IST)
ಮೈಸೂರಿನ ದೇವರಾಜ ಮಾರುಕಟ್ಟೆ ನೆಲಸಮಕ್ಕೆ ಪಾರಂಪರಿಕ ಸಮಿತಿ ಒಪ್ಪಿಗೆ ವಿಚಾರ‌ ಕುರಿತು, ಸರಿಯಾದ ತಜ್ಞರ ನೇಮಕ ಮಾಡಿ ಪರಿಶೀಲಿಸಿದ್ರೆ ಮಾರುಕಟ್ಟೆ ಪುನಶ್ಚೇತನಗೊಳಿಸಬಹುದು ಎಂದು ರಾಣಿ ಪ್ರಮೋದಾ ದೇವಿ ಒಡೆಯರ್​ ಹೇಳಿದ್ದಾರೆ. ಸರ್ಕಾರ ಆ ಕೆಲಸವನ್ನು ಮಾಡುತ್ತೆ ಅನ್ನೋ ಭರವಸೆ ಇದೆ. ರಾಜೇಂದ್ರ ವಿಲಾಸ ಪ್ಯಾಲೇಸ್​​ ಕೂಡ ಶಿಥಿಲಾವಸ್ಥೆ ತಲುಪಿತ್ತು. ಅದನ್ನ ನಾವು ಪುನಶ್ಚೇತನ ಮಾಡಿದ್ದೇವೆ. ಪ್ರಯತ್ನ ಮಾಡಿದ್ರೂ ಯಾವುದು ಆಗಲ್ಲ ಅನ್ನೋ ಹಾಗಿಲ್ಲ. ಪ್ರಯತ್ನ ಮಾಡಿದ್ರೆ ದೇವರಾಜ ಮಾರುಕಟ್ಟೆ ಉಳಿಸಿಕೊಳ್ಳಬಹುದು. ಸರ್ಕಾರ ಸಹಕಾರ ನೀಡುವ ಭರವಸೆ ನೀಡಿದ್ರೆ ನಾವೇ ಪುನಶ್ಚೇತನಗೊಳಿಸುತ್ತೇವೆ. ಪಾರಂಪರಿಕ ಕಟ್ಟಡಗಳ ಮೇಲೆ ಎಲ್ಲರಿಗೂ ಒಂದು ಎಮೋಷನ್ ಇದೆ. ಎಲ್ಲರ ಅಭಿಪ್ರಾಯಗಳ ಸಂಗ್ರಹಿಸಿ ಮುಂದುವರಿಯಬೇಕು. ಜನರ ಭಾವನೆಗೆ ಧಕ್ಕೆ ತರುವ ಕೆಲಸ ಆಗಬಾರದು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ