ಶೀರೂರು ಶ್ರೀಗಳ ಸಾವಿನ ಅನುಮಾನಗಳಿಗೆ ಇಂದು ಬೀಳಲಿದೆಯಾ ತೆರೆ?!

ಸೋಮವಾರ, 30 ಜುಲೈ 2018 (09:36 IST)
ಉಡುಪಿ: ಶೀರೂರು ಲಕ್ಷ್ಮೀವರ ಸ್ವಾಮೀಜಿಗಳ ಅನುಮಾನಸ್ಪದ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಗೆ ಇಂದು ಒಂದು ಹಂತದ ಕೊನೆ ಸಿಗಲಿದೆಯಾ?

ಶ್ರೀಗಳ ಮರಣೋತ್ತರ ಪರೀಕ್ಷಾ ವರದಿ ಇಂದು ಪೊಲೀಸರ ಕೈ ಸೇರಲಿದೆ ಎನ್ನಲಾಗಿದ್ದು, ಇದರಿಂದ ಪೊಲೀಸರಿಗೆ ಸಾವಿನ ನಿಖರ ಕಾರಣ ತಿಳಿಯಲಿದೆ. ಆದರೆ ಮರಣೋತ್ತರ ಪರೀಕ್ಷೆ ಬಗ್ಗೆ ಪೊಲೀಸರಿಂದ ಅಧಿಕೃತ ಹೇಳಿಕೆ ಬಂದಿಲ್ಲ.

ಆದರೆ ಕೆಲವು ಮೂಲಗಳ ಪ್ರಕಾರ ಮರಣೋತ್ತರ ವರದಿಯಲ್ಲಿ ಲಿವರ್, ಕಿಡ್ನಿಗೆ ಹಾನಿಯಾಗಿದೆ ಎಂದಷ್ಟೇ ಉಲ್ಲೇಖವಾಗಿದೆ. ವಿಷ ಪ್ರಾಷನದ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ ಎನ್ನಲಾಗಿದೆ. ಹೀಗಾದರೆ ಮತ್ತೆ ಪೊಲೀಸರಿಗೆ ನಿಖರ ಕಾರಣ ಹುಡುಕುವ ತಲೆನೋವು ಶುರುವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ