ಶಿರೂರು ಗುಡ್ಡಕುಸಿತ: ಗಂಗಾವಳಿ ನದಿಯಲ್ಲಿ ಸಿಗುತ್ತಿದೆ ಮೂಳೆಗಳು

Sampriya

ಸೋಮವಾರ, 30 ಸೆಪ್ಟಂಬರ್ 2024 (16:54 IST)
Photo Courtesy X
ಅಂಕೋಲಾ: ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ದುರಂತದಲ್ಲಿ ಇನ್ನೂ ಇಬ್ಬರು ಪತ್ತೆಯಾಗಿಲ್ಲ. ಗಂಗಾವಳಿ ನದಿಯಲ್ಲಿ ಶೋಧ ಕಾರ್ಯದ ವೇಳೆ ಇದೀಗ ಮನುಷ್ಯನ ಮೂಳೆ ಪತ್ತೆಯಾಗಿದೆ.

ಡಿಎನ್‌ಎ ವರದಿಯಲ್ಲಿ ಇದು ಯಾರಿಗೆ ಸೇರಿದ್ದು ಎಂಬುದು ತಿಳಿದುಬರಬೇಕಿದೆ. ದುರಂತದಲ್ಲಿ ನಾಪತ್ತೆಯಾಗಿದ್ದ ಕೇರಳ ಲಾರಿ ಚಾಲಕ ಅರ್ಜುನ್ ದೇಹ ಸತತ ಕಾರ್ಯಚರಣೆ ಬಳಿಕ ಈಚೆಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದು. ಇದೀಗ ನಾಪತ್ತೆಯಾದ ಮತ್ತಿಬ್ಬರಿಗಾಗಿ ಶೋಧ ಕಾರ್ಯಮುಂದುವರೆದಿದೆ.

ಸ್ಥಳೀಯರಾದ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಪತ್ತೆಗಾಗಿ ನಿರಂತರ ಶೋಧ ಕಾರ್ಯ ನಡೆಯುತ್ತಿದೆ.

ಪತ್ತೆಯಾದ ಮೂಳೆ ಈಚೆಗೆ ಅರ್ಜುನ್‌ಗೆ ಸೇರಿದ್ದ ಎಂದು ಡಿಎನ್‌ಎ ವರದಿಯಲ್ಲಿ ತಿಳಿದುಬರಬೇಕಿದೆ.
  ಜುಲೈ 16ರಂದು ಬೆಳಿಗ್ಗೆ 8.45ಕ್ಕೆ ಶಿರೂರಿನಲ್ಲಿ ಭೂ ಕುಸಿತ ಸಂಭವಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ