ಪಡಿತರ ಚೀಟಿಯಲ್ಲಿ ಸಿದ್ದಗಂಗಾ ಶ್ರೀ ಭಾವಚಿತ್ರ ಮುದ್ರಿಸಲು ಒತ್ತಾಯ!

ಬುಧವಾರ, 23 ಜನವರಿ 2019 (14:43 IST)
ನಡೆದಾಡುವ ದೇವರು, ಸಾವಿರಾರು ವಿದ್ಯಾರ್ಥಿಗಳಿಗೆ ನಿತ್ಯ ಅಕ್ಷರದ ಜೊತೆಗೆ ತ್ರಿವಿಧ ದಾಸೋಹ ನಡೆಸುತ್ತಾ ಬದಲಾವಣೆ ತಂದಿರುವ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಭಾವಚಿತ್ರವನ್ನು ಪಡಿತರ ಚೀಟಿಯಲ್ಲಿ ಮುದ್ರಿಸಬೇಕು. ಹೀಗಂತ ಒತ್ತಾಯ ಕೇಳಿಬರುತ್ತಿದೆ.

ದಾವಣಗೆರೆಯಲ್ಲಿ  ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್‌ ರಾಜ್ಯ ಸರ್ಕಾರವನ್ನು ಈ ರೀತಿ ಆಗ್ರಹಿಸಿದ್ದಾರೆ.
ಸ್ವಾಮೀಜಿ ಅವರಿಗೆ ಪ್ರಿಯವಾದ ವಿಷಯದಲ್ಲಿ ಅವರಿಗೆ ಗೌರವ ಸೂಚಿಸುವುದು ಹೆಚ್ಚು ಅರ್ಥ ಪೂರ್ಣವಾಗಿರುತ್ತದೆ. ಭಾರತ ರತ್ನ ಸೇರಿದಂತೆ ಹಲವು ಗೌರವಗಳನ್ನು ಶ್ರೀಗಳಿಗೆ ನೀಡಬೇಕು ಎಂದು ಒತ್ತಾಯಗಳು ಕೇಳಿ ಬರುತ್ತಿವೆ.  

ಬಡತನ ನಿವಾರಣೆಗೆ ಶ್ರೀಗಳು ಸದಾ ಶ್ರಮಿಸಿದ್ದಾರೆ. ಯಾವ ವಿಚಾರದಲ್ಲಿ ಶ್ರೀಗಳಿಗೆ ಆಸಕ್ತಿ ಇತ್ತೋ ಆ ವಿಚಾರದಲ್ಲಿ ಸರ್ಕಾರ ಗೌರವ ನೀಡಬೇಕು. ಹೀಗಾಗಿ ರಾಜ್ಯ ಸರ್ಕಾರದ ಪಡಿತರ ಚೀಟಿಯಲ್ಲಿ ಶಿವಕುಮಾರ ಸ್ವಾಮೀಜಿಯವರ ಭಾವ ಚಿತ್ರವನ್ನು ಮುದ್ರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ