ಆರೋಗ್ಯ ,ವೈದ್ಯಕೀಯ ಶಿಕ್ಷಣ ಸಚಿವರು ಕೊರೊನಾ ಬಗ್ಗೆ ಮಾಹಿತಿ ನೀಡ್ತಿಲ್ಲ-ಸಿದ್ದರಾಮಯ್ಯ ಆರೋಪ

ಶುಕ್ರವಾರ, 13 ಮಾರ್ಚ್ 2020 (11:47 IST)
ಬೆಂಗಳೂರು : ಕಲಬುರಗಿಯಲ್ಲಿ ಕೊರೊನಾಗೆ ವೃದ್ದ ಬಲಿಯಾಗಿದ್ದು, ಇದರಿಂದ ರಾಜ್ಯದಲ್ಲಿರುವ ಜನತೆ ಆತಂಕದಲ್ಲಿದ್ದಾರೆ. ಆದರೆ ಸರ್ಕಾರ ಮಾತ್ರ ಸರಿಯಾದ ಮಾಹಿತಿ ಕೊಟ್ಟಿಲ್ಲ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.


ಸರ್ಕಾರ ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡಬೇಕು. ಆರೋಗ್ಯ ವೈದ್ಯಕೀಯ ಶಿಕ್ಷಣ ಸಚಿವರು ಮಾಹಿತಿ ನೀಡ್ತಿಲ್ಲ, ಕೊರೊನಾ ಸಂಬಂಧ ಸರಿಯಾದ ಮಾಹಿತಿ ನೀಡ್ತಿಲ್ಲ. ವೈದ್ಯರ ಜತೆ ಸಂಪರ್ಕ ಇದ್ದಂತೆ ಕಾಣಿಸುವುದಿಲ್ಲ. ಅಧಿಕಾರಿಗಳ ಜತೆಯೂ ಅವರು ಸಭೆ ಮಾಡಿದಂತೆ ಕಾಣದತಿಲ್ಲ ಎಂದು ಡಾ.ಸುಧಾಕರ್, ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.


ರಾಜ್ಯದಲ್ಲಿ ಕೊರೊನಾ ಸಂಬಂಧ ಲ್ಯಾಬ್ ತೆರೆಯಬೇಕು. ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲವೆಂದು ಕಾಣ್ತಿದೆ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ