ಪ್ರಧಾನಿ ಎದೆ ಸೈಜ್ ಬಗ್ಗೆ ಸಿದ್ದರಾಮಯ್ಯ ಕುಟುಕಿದ್ದೇನು?

ಭಾನುವಾರ, 13 ಅಕ್ಟೋಬರ್ 2019 (14:40 IST)

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಿಪಕ್ಷನಾಯಕ ಸಿದ್ದರಾಮಯ್ಯ ಕಟು ಟೀಕೆ ಮುಂದುವರಿಸಿದ್ದಾರೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರ ಹಾಗೂ ನೆರೆ ಪ್ರವಾಹ ಅಪಾರ ನಷ್ಟಕ್ಕೆ ಕಾರಣವಾಗಿದೆ. ಇದನ್ನು ಸರಕಾರವೇ ಒಪ್ಪಿಕೊಳ್ಳುತ್ತದೆ.

ಆದರೆ ಎದೆ ಎಷ್ಟು ಇಂಚು ಇದ್ದರೇನು ಉಪಯೋಗ, ಸಂತ್ರಸ್ಥರ ಸಂಕಷ್ಟಕ್ಕೆ ಸ್ಪಂದನೆ ಮಾಡಿ ಸಮಸ್ಯೆ ಬಗೆಹರಿಸೋ ಹೃದಯವಂತರು ಬೇಕು ಅಂತ ಪ್ರಧಾನಿಯನ್ನು ಟೀಕೆ ಮಾಡಿದ್ದಾರೆ ಸಿದ್ದರಾಮಯ್ಯ.

ಕರ್ನಾಟಕದಲ್ಲಿ ಪ್ರವಾಹ ಬಂದು ಕೋಟ್ಯಂತರ ಜನರು ತೊಂದರೆ ಅನುಭವಿಸಿದರೂ ಬಂದು ನೋಡದ ಮೋದಿ, ಬೇರೆ ರಾಜ್ಯಗಳಲ್ಲಿ ನೆರೆ ಬಂದಾಗ ಕೂಡಲೇ ಟ್ವಿಟ್ ಮಾಡಿದ್ದಾರೆ ಅಂತ ಮೋದಿ ಕಾರ್ಯವೈಖರಿಯನ್ನು ಸಿದ್ದರಾಮಯ್ಯ ದೂರಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ