ಕೊರೊನಾ ವಿಚಾರಕ್ಕಾಗಿ ಒಗ್ಗಟ್ಟಾದ ವಿಪಕ್ಷಗಳು; ಇಂದು ನಾಯಕರ ಸಭೆ ಕರೆದ ಸಿದ್ದರಾಮಯ್ಯ

ಗುರುವಾರ, 30 ಏಪ್ರಿಲ್ 2020 (10:43 IST)
ಬೆಂಗಳೂರು : ಇಂದು ಬೆಳಿಗ್ಗೆ 11ಕ್ಕೆ ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಯಕರ ಸಭೆ ಕರೆಯಲಾಗಿದೆ.


ಈ ಸಭೆಗೆ ಜೆಡಿಎಸ್ ಸೇರಿದಂತೆ 10ಕ್ಕೂ ಹೆಚ್ಚು ಸಂಘಟನೆಗಳ ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ. ಪತ್ರ ಬರೆದು ಸಿದ್ದರಾಮಯ್ಯ ನಾಯಕರಿಗೆ ಸಭೆಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.


ಈ ಸಭೆಯಲ್ಲಿ ರೈತರಿಗೆ, ಕಾರ್ಮಿಕರಿಗೆ, ಬೀದಿ ವ್ಯಾಪಾರಿಗಳಿಗೆ ಹಾಗೂ ಇತರೆ ಅಸಂಘಟಿತ ವಲಯಕ್ಕೆ ಸರ್ಕಾರ ನೀಡಬೇಕಿರುವ ಸೌಲಭ್ಯ, ಸಹಾಯದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಲ್ಲದೇ ಕೃಷಿ ವಿಚಾರವಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ಲ್ಯಾನ್ ಮಾಡಿದ್ದು, ಸಭೆಯ ಅಂಶಗಳನ್ನು ವರದಿ ರೂಪದಲ್ಲಿ ಸಿಎಂಗೆ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ