ತೇಜಸ್ವಿ ಸೂರ್ಯ ಮೂರ್ಖ, ಹಿ ಇಸ್ immatured ಫೆಲೋ

ಬುಧವಾರ, 25 ಸೆಪ್ಟಂಬರ್ 2019 (19:17 IST)
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವನೊಬ್ಬ ಮೂರ್ಖ ಮನುಷ್ಯ. ಹಿ ಇಸ್ immatured ಫೆಲೋ, ಹೀಗಂತ ಮಾಜಿ ಸಚಿವರೊಬ್ಬರು ಕಿಡಿಕಾರಿದ್ದಾರೆ.

ಮಾಜಿ ಸಚಿವ, ಶಾಸಕ ಎಂ ಬಿ ಪಾಟೀಲ ಹೇಳಿಕೆ ನೀಡಿದ್ದು, ಬೈ ಎಲೆಕ್ಷನ್ ನಲ್ಲಿ ನಾವು ಸ್ಪರ್ಧಿಸಲು ಗೆಲ್ಲುವುದಕ್ಕೆ ನಿಂತಿದ್ದೇವೆ.
ಅಥಣಿ, ಕಾಗವಾಡ, ಗೋಕಾಕ ಸೇರಿ 12 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸೋದು ನಿಶ್ಚಿತ ಅಂದ್ರು.

ಸಿದ್ದರಾಮಯ್ಯ ಹದ್ದಾಗಿ ಕುಕ್ಕಿದ ಕುಮಾಸ್ವಾಮೀ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು. ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಸರಕಾರ ರಚಿಸಿದ್ದರು. ಮೈತ್ರಿ ಸರಕಾರದಲ್ಲಿ ತಪ್ಪುಗಳಾಗಿವೆ. ಜೆಡಿಎಸ್ ಪಕ್ಷದ ಸಚಿವರು, ಶಾಸಕರಿಂದ ತಪ್ಪು ಆಗಿವೆ.

ಸರಕಾರ ಇದ್ದಾಗೊಂದು ಇಲ್ಲದಾಗೊಂದು ಕುಮಾರಸ್ವಾಮಿ ಹೇಳಿಕೆ ನೀಡೋದು ಸರಿಯಲ್ಲ.
14 ತಿಂಗಳು ಸಿಎಂ ಇದ್ದಾಗ ಕುಮಾರಸ್ವಾಮಿ ಹೇಳಬೇಳಕಿತ್ತು. ಆವಾಗ ಅವರ ಮಾತಿಗೆ ಬೆಲೆ ಇರ್ತಿತ್ತು ಈಗಲ್ಲ ಎಂದು ಕುಟುಕಿದ್ರು.

ಕುಮಾರಸ್ವಾಮಿ ಈ ರೀತಿ ಹೇಳಿಕೆ ನೀಡೋದನ್ನ ಬಿಡಬೇಕು. ಬಿಜೆಪಿ ಸರಕಾರ ನೆರೆಯಲ್ಲಿ ಮನೆ ಕಳೆದುಕೊಂಡುವರಿಗೆ ಒಂದು ರೂಪಾಯಿ ಪರಿಹಾರ ಬಿಡುಗಡೆ ಮಾಡಿಲ್ಲ. ಸಂತ್ರಸ್ಥರ ಶಾಪ ಬಿಜೆಪಿ ಸರಕಾರಕ್ಕೆ ತಟ್ಟಲಿದೆ. ಇದನ್ನು ನೋಡಿದಾಗ ಕುಮಾರ ಸ್ವಾಮೀ ಸರಕಾರ ಸಾವಿರ ಪಟ್ಟು ಒಳ್ಳೆಯದು ಎಂದ್ರು.

ಇನ್ನು,  ಕೇಂದ್ರದ ನೆರವು ಅಗತ್ಯ ಇಲ್ಲಾ ಎನ್ನುವ ಸಂಸದ್ ತೇಜಸ್ವಿ ಸೂರ್ಯ ಹೇಳಿಕೆ ವಿಚಾರಕ್ಕೆ ಟಾಂಗ್ ನೀಡಿದ್ದು,
ತೇಜಸ್ವಿ ಸೂರ್ಯ ಅವನೊಬ್ಬ ಮೂರ್ಖ ಮನುಷ್ಯ. ಹಿ ಇಸ್ immatured ಫೆಲೋ. ತಕ್ಷಣ ತೇಜಸ್ವಿ ಸೂರ್ಯ ಸಂತ್ರಸ್ಥರ ಕ್ಷಮೆ ಕೇಳಬೇಕು ಅಂತ ಎಂಬಿಪಿ ಆಗ್ರಹ ಮಾಡಿದ್ರು.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ