ರೈತರಿಗೆ ಆಕ್ಸಿಸ್ ಬ್ಯಾಂಕ್ ನಿಂದ ಬಂಧನದ ವಾರೆಂಟ್

ಸೋಮವಾರ, 5 ನವೆಂಬರ್ 2018 (15:10 IST)
ರೈತರಿಗೆ ಆಕ್ಸಿಸ್ ಬ್ಯಾಂಕ್ ನಿಂದ ಬಂಧನದ ವಾರೆಂಟ್ ಜಾರಿಗೊಳಿಸಲಾಗಿದೆ. ವಾರೆಂಟ್  ವಿರೋಧಿಸಿ ರೈತ ಸಂಘದಿಂದ ಬ್ಯಾಂಕ್ ಗೆ‌ ಮುತ್ತಿಗೆ  ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಹಾಸನದ ಬಿ.ಎಂ. ರಸ್ತೆಯಲ್ಲಿರುವ ಎಕ್ಸಿಸ್ ಬ್ಯಾಂಕ್ ನಿಂದ ರೈತರಿಗೆ ಬಂಧನದ ವಾರೆಂಟ್ ಹೊರಡಿಸಲಾಗಿದೆ. ಅರಸೀಕೆರೆ  ತಾಲ್ಲೂಕಿನ ಬಿ.ಎಂ.ಕುರ್ಕೆಯ  ರೈತ‌ ಮಹಿಳೆಗೆ ನೋಟಿಸ್ ತಲುಪಿದೆ.  ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದ‌ ರೈತ ‌ಮಹಿಳೆಗೆ‌ ನೋಟಿಸ್ ಬಂದಿದೆ. ನೋಟಿಸ್  ನೀಡಿರುವುದನ್ನು‌ವಿರೋಧಿಸಿ ಬ್ಯಾಂಕ್ ‌ಮುಂದೆ‌ ರೈತ‌ಸಂಘದಿಂದ ಆಕ್ರೋಶ ವ್ಯಕ್ತಪಡಿಸಲಾಯಿತು.

ಬೆಳಗಾವಿ ಜಿಲ್ಲೆಯ ‌ಬೈಲಹೊಂಗಲ ತಾಲ್ಲೂಕಿನ 180  ರೈತರಿಗೆ ನೋಟಿಸ್  ಜಾರಿ‌ಮಾಡಿರುವ   ಎಕ್ಸಿಸ್ ಬ್ಯಾಂಕ್ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು. ಕೆಲವು ರೈತರಿಗೆ ‌ಬಂಧನ ವಾರೆಂಟ್ ‌ನೀಡಿರುವುದು  ಖಂಡನೀಯ. ರೈತರ‌ಮೇಲೆ ದೌರ್ಜನ್ಯ ‌ಮುಂದುವರೆದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ