ಮೀಸಲಾತಿ ವಿಚಾರವಾಗಿ ಗಲಾಟೆ ಆಗಿದ್ದು ಬಿಜೆಪಿ ಕಾರಣ: ಎಚ್ ಡಿ ಕೆ

ಮಂಗಳವಾರ, 28 ಮಾರ್ಚ್ 2023 (21:10 IST)
ಚುನಾವಣಾ ಹೋಗಬೇಕು ಎಂದು ಎಲ್ಲರನ್ನೂ ತೃಪ್ತಿಪಡಿಸಬೇಕೆಂಬ ಪ್ರಯತ್ನದಲ್ಲಿ ಸರ್ಕಾರವಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.ಮೀಸಲಾತಿ ವಿಚಾರವಾಗಿ ಮಾತನಡಿದ ಅವರು ಮತ ಪಡೆಯೋದಕ್ಕೆ ಜಾತಿ ಜಾತಿಗಳ ನಡುವೆ ಸಂಘರ್ಷ ಮಾಡಿ ಸಮಾಜ ಒಡೆಯುವ ಕೆಲಸ ಮಾಡಬಾರದು.ಈ ರೀತಿಯ ವಾತವರಣ ನಿರ್ಮಾಣಕ್ಕೆ ಎರಡು ರಾಷ್ಟ್ರೀಯ ಪಕ್ಷ ಕಾರಣ ಮೀಸಲಾತಿ ವಿಚಾರದಲ್ಲಿ ಹುಡುಕಾಟ ಮಾಡ್ತಿದ್ದಾರೆ ಎಂದು ಹೇಳಿದರು.ಇನ್ನೂ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ವಿಚಾರವಾಗಿ ಸ್ಪಂದಿಸಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು.ಯಾರು ಕರೆದುಕೊಂಡು ಹೋಗಿ ಕಲ್ಲು ಹೊಡಿದಿದ್ದಾರೆ ಅನ್ನೋದನ್ನು ನಾನು ಮಾತನಾಡೋಕೆ ಹೋಗಲ್ಲ.ಇಂತಹ ವಾತವರಣ ಸೃಷ್ಟಿ ಮಾಡಿರೋದು ಬಿಜೆಪಿ ಸರ್ಕಾರ.ಅವರೆ ಇದನ್ನ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ