ಮುಚ್ಚಳಿಕೆ ಉಲ್ಲಂಗನೆ ಮಾಡಿ ಧ್ವಜ ಹಾರಿಸಿದ್ದಾರೆ ಇದು ತಪ್ಪಲ್ವಾ ಎಂದು ತಿರುಗೇಟು ಕೊಟ್ಟ ಸಿಎಂ

geetha

ಮಂಗಳವಾರ, 30 ಜನವರಿ 2024 (14:00 IST)
ಬೆಂಗಳೂರು-ಮಂಡ್ಯ ಗಲಭೆಗೆ ಸರ್ಕಾರದ ವೈಫಲ್ಯ ಕಾರಣ ಎಂಬ ಸುಮಲತಾ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.ವೈಪಲ್ಯ ಅಂದ್ರೆ ಏನು, ಏನು ಕಾರಣ ಕೊಟ್ಟಿದ್ದಾರೆ ವೈಪಲ್ಯಕ್ಕೆ ಅವರು ಪರ್ಮೀಶನ್ ಕೇಳಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.ಒತ್ತಾಯ ಮಾಡಿದ್ದಾರೆ ಅನುಮತಿ ಕೊಟ್ಟಿದ್ದಾರೆ ಅಷ್ಟೇ, ರಾಷ್ಟ್ರ ಧ್ವಜ ಕನ್ನಡ ಧ್ವಜ ಹಾರಿಸಿ ಅಂತ ಪರ್ಮೀಶನ್ ಕೊಟ್ಟಿರೋದು.ಯಾವುದೇ ಧರ್ಮದ ಪಕ್ಷದ ಧ್ವಜ ಹಾರಿಸಬಾರದು ಅಂತ ಮುಚ್ಚಳಿಕೆಯಲ್ಲಿ ಹೇಳಿದ್ದಾರೆ ಅದನ್ನು ಮೀರಿ ಅಲ್ಲಿ ಭಾಗದ ಧ್ವಜ ಹಾರಿಸಿದ್ದಾರೆ.ಇದನ್ನು ರಾಜಕೀಯ ಗೊಳಿಸಿ, ಶಾಂತಿಕದಡುವ ಕೆಲಸ ಮಾಡ್ತಿದ್ದಾರೆ ಬಿಜೆಪಿಯವರು ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
 
ಇನ್ನೂ ಮಂಡ್ಯ ಬಂದ್ ಗೆ ಕರೆಕೊಟ್ಟ ವಿಚಾರವಾಗಿ ಏನಾದ್ರು ಮಾಡಿಕೊಳ್ಳಲಿ ಅವರು, ಬಂದ್ ಮಾಡಬೇಕಾ ಇಲ್ವಾ ಅಂತ ಜನ ತೀರ್ಮಾನ ಮಾಡಬೇಕು.ಇವರೇ ಬರೆದುಕೊಟ್ಟ ಮುಚ್ಚಳಿಕೆ ಉಲ್ಲಂಗನೆ ಮಾಡಿ ಭಾಗವಾಧ್ವಜ ಹಾರಿಸಿದ್ದಾರೆ ಇದು ತಪ್ಪಲ್ವಾ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ