ದೇವೇಗೌಡ್ರ ಕುಟುಂಬದ ವಿರುದ್ಧ ಫೈಟ್ ಮಾಡೋಕೆ ಜನರ ಒಲವಿದೆ ಎಂದ ಕಾಂಗ್ರೆಸ್ ನಾಯಕ

ಶನಿವಾರ, 16 ಮಾರ್ಚ್ 2019 (16:54 IST)
ಹೆಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಹೋರಾಡಲು ಜನರ ಒಲವಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.  

ದೇಶದ ಪರವಾಗಿರಬೇಕೆಂದು ಎಲ್ಲರೂ ಮಾತನಾಡಿದ್ದಾರೆ. ಇನ್ನೂ ನಾಲ್ಕು ತಾಲ್ಲೂಕುಗಳ ಕಾರ್ಯಕರ್ತರ ಅಭಿಪ್ರಾಯ ಪಡೆಯಬೇಕು. ಈಗ ಸಭೆ ಮಾಡಿದ ಕಡೆಗಳಲ್ಲಿ ನಿಮ್ಮ‌ ತೀರ್ಮಾನದ ಜೊತೆಗಿರ್ತೀವಿ ಎಂದು ಎಲ್ಲರೂ ಹೇಳಿದ್ದಾರೆ. ಹೀಗಂತ ಹಾಸನದಲ್ಲಿ ಎ.ಮಂಜು ಹೇಳಿದ್ದಾರೆ.

ಕುಟುಂಬದ ವಿರುದ್ಧವಾಗಿ ಇರಬೇಕು ಎಂದು ಅಭಿಪ್ರಾಯ ಹೇಳಿದ್ದಾರೆ. ನನ್ನ ನಿರ್ಧಾರಕ್ಕಿಂತ, ಜನರ ನಿರ್ಧಾರದ ಪರವಾಗಿ ನಾನಿರ್ತೀನಿ. ಕಾರ್ಯಕರ್ತರ, ಜನರ ಭಾವನೆಯಂತೆ ನಾನು ಇರ್ತೇನೆ. ನೀವೇನು ತೀರ್ಮಾನ ಮಾಡ್ತೀರೋ ಆ ತೀರ್ಮಾನಕ್ಕೆ ಬದ್ಧ ಎನ್ನೋದು ನಮ್ಮ ಬೆಂಬಲಿಗರ ಅಭಿಪ್ರಾಯವಾಗಿದೆ ಎಂದರು.

ನಾಳೆ ಸಂಜೆ ನಂತರ ನನ್ನ ನಿರ್ಧಾರ ಘೋಷಣೆ ಮಾಡ್ತೇನೆ. ಸೋಮವಾರ ತಮ್ಮ ನಿರ್ಧಾರ ಪ್ರಕಟಿಸೋದಾಗಿ ಎ.ಮಂಜು ತಿಳಿಸಿದ್ರು.

ಇಂದು ಶಾಸಕ ಪ್ರೀತಂ ಗೌಡ ಮನೆಗೆ ಭೇಟಿ ನೀಡಿ ಈ ಹೇಳಿಕೆ ನೀಡಿದ್ರು. ಇದೇ ವೇಳೆ, ಶಾಸಕರ ಮನೆಯಲ್ಲಿ ಬಿಜೆಪಿ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದ ಎ.ಮಂಜು ಬಿಜೆಪಿ ಸೇರುವ ಮುನ್ಸೂಚನೆ ನೀಡಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ