ಬಿಜೆಪಿಗೆ ಆನೆ ಬಲ ತುಂಬಿದ ಸೊಗಡು ಶಿವಣ್ಣ

ಸೋಮವಾರ, 11 ಮಾರ್ಚ್ 2019 (15:31 IST)
ಕಳೆದ ವಿಧಾನಸಭೆ ಚುನಾವಣೆ ಸೇರಿದಂತೆ ಮೂರ್ನಾಲ್ಕು ವರ್ಷದಿಂದ ಬಿಜೆಪಿ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಸೊಗಡು ಶಿವಣ್ಣ ಮತ್ತೆ ಪಕ್ಷದತ್ತ ಮುಖ ಮಾಡಿದ್ದಾರೆ.

ತುಮಕೂರು ಜಿಲ್ಲಾ ಬಿಜೆಪಿ ಘಟಕದ ಸಂಪರ್ಕದಿಂದ ದೂರ ಇದ್ದ ಮಾಜಿ‌ ಸಚಿವ, ಹಿಂದೂ ಫೈರ್ ಬ್ರಾಂಡ್‌ ಸೊಗಡು ಶಿವಣ್ಣ ಈಗ ಮತ್ತೆ ಬಿಜೆಪಿಗೆ ಬಲ ತುಂಬಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. ಬಿಜೆಪಿ ಸಂಭಾವ್ಯ ಅಭ್ಯರ್ಥಿಯಾದ ಮಾಜಿ ಸಂಸದ ಜಿ.ಎಸ್.ಬಸವರಾಜು ಅವರ ವಿರುದ್ದ ಕೆಂಡ ಕಾರುತಿದ್ದ ಸೊಗಡು, ಈಗ ದ್ವೇಷ ಮರೆತು ಬಿಜೆಪಿ ಸಭೆಯಲ್ಲಿ ಭಾಗಿಯಾಗಿದ್ದಾರೆ. 

ಶಿವಣ್ಣರ ಶಾಂತವಾದ ಮುನಿಸಿನಿಂದಾಗಿ ಬಿಜೆಪಿಗೆ ಇನ್ನಷ್ಟು ಬಲಬಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೊಗಡು ಬಿಜೆಪಿ ಪರ ಯಾವುದೇ ರೀತಿಯ ಪ್ರಚಾರ ಮಾಡದೇ‌ ದೂರ ಉಳಿದಿದ್ದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ