ಕೊರೊನಾದಿಂದಲೇ ಮುಂಬೈನಲ್ಲಿ ವ್ಯಕ್ತಿ ಸತ್ತಿದ್ದ ಎಂದ ಶಾಸಕ

ಶನಿವಾರ, 2 ಮೇ 2020 (14:40 IST)
ಕೊರೊನಾದಿಂದಲೇ ಮುಂಬೈನಲ್ಲಿ ಸತ್ತಿದ್ದ ವ್ಯಕ್ತಿಯನ್ನು ಮಂಡ್ಯದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಹೊಸ ಬಾಂಬ್ ಸಿಡಿಸಿದ್ದಾರೆ.

ಸಿ.ಎಸ್.ಪುಟ್ಟರಾಜು ಹೊಸ ಬಾಂಬ್ ಸಿಡಿಸಿದ್ದು, ಮುಂಬೈನಿಂದ ಶವ ತರಲಾಗಿದೆ. ಇದರ ಹಿಂದೆ ಕಾಣದ ಕೈಗಳಿದ್ದು ಅದನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹ ಮಾಡಿದರು.

ಶವದ ಬಂದಿದ್ದ ವ್ಯಕ್ತಿಯೊಬ್ಬ ಕೆ.ಆರ್.ಪೇಟೆಯಲ್ಲಿ ಉಳಿದುಕೊಂಡಿದ್ದು, ಆತನನ್ನು ಪತ್ತೆ ಹಚ್ಚಿ ಟ್ರಾವೆಲ್ ಹಿಸ್ಟರಿ ಕಲೆ ಹಾಕಬೇಕಿದೆ.

ಶವ ಸಾಗಿಸಿದ ಅಂಬ್ಯುಲೆನ್ಸ್ ಎಲ್ಲೆಲ್ಲಿ ನಿಂತು ಬಂದಿದೆ. ಶವ ಸಾಗಾಟಕ್ಕೆ ಮಹಾರಾಷ್ಟ್ರದಿಂದ ಸರಕಾರಿ ವಾಹನ ಯಾಕೆ ಕೊಟ್ಟರು ಅನ್ನೋದನ್ನೆಲ್ಲಾ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ