ಮಾಜಿ ಸಿಎಂಗೆ ಮನವಿ ಕೊಡಲು ಬಿಡದ ಪೊಲೀಸರು

ಭಾನುವಾರ, 13 ಅಕ್ಟೋಬರ್ 2019 (15:45 IST)
ಮಾಜಿ ಸಿಎಂ ಸ್ಥಳೀಯ ಮುಖಂಡರು ಮನವಿ ನೀಡಲು ಮುಂದಾಗಿರೋದಕ್ಕೆ ಪೊಲೀಸರು ಅಡ್ಡಿಪಡಿಸಿರೋ ಘಟನೆ ನಡೆದಿದೆ.

ದಾವಣಗೆರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆಗೆ ಆಗಮಿಸಿದ್ದ ಸಿದ್ದರಾಮಯ್ಯರನ್ನ ಶಿವಮೊಗ್ಗ ಸರ್ಕಲ್ ನಿಂದ ಕಾರ್ಯಕ್ರಮದ ವೇದಿಕೆವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸ್ವಾಗತ ಕೋರಲಾಯಿತು.

ಬಹುದಿನದಿಂದ ನೆನೆಗುದಿಗೆ ಬಿದ್ದಿದ್ದ ಇಂದಿರಾ ಕ್ಯಾಂಟೀನ್ ನನ್ನು ಮಾಜಿ ಸಿ ಎಂ‌ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ರು.

ಆದರೆ, ಮಾಜಿ ಸಿ ಎಂ‌ ಸಿದ್ದರಾಮಯ್ಯ ಅವರಿಗೆ ಮನವಿ‌ ಕೊಡಲು ಮುಂದಾದ ಸ್ಥಳೀಯ ಮುಖಂಡರಿಗೆ ಪೊಲೀಸರು ಅಡ್ಡಿಪಡಿಸಿದ್ರು. ಮನವಿ‌ ಕೊಡಲು ಮುಂದಾಗಿದ್ದ ಡಿಎಸ್ ಎಸ್ ಮುಖಂಡ ಮಹಾಂತೇಶ್ ಗೆ ಅಡ್ಡಿ ಪಡಿಸಿದ ಪೊಲೀಸರು ಹೊರ ತಳ್ಳಿದ ಘಟನೆ ನಡೆಯಿತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ