ಭೂಗತ ಪಾತಕಿ ಕೈವಾಡ : ಉದ್ಯಮಿಗೆ ಗುಂಡೇಟು?

ಶನಿವಾರ, 31 ಆಗಸ್ಟ್ 2019 (18:09 IST)
ಭೂಗತ ಪಾತಕಿಗಳ ಅಟ್ಟಹಾಸ ಮತ್ತೆ  ಮೆರೆಯುತ್ತಿದೆ. ತೆರೆಮರೆಯಲ್ಲೇ ಇದ್ದುಕೊಂಡ ಪಾತಕಿಗಳು ಜನರಲ್ಲಿ ಭಯ ಹುಟ್ಟು ಹಾಕುತ್ತಿದ್ದಾರೆ.

ಮಂಗಳೂರಲ್ಲಿ ಉದ್ಯಮಿ ಕಾರಿಗೆ ಗುಂಡು ಬಿದ್ದಿವೆ. ಮಂಗಳೂರಿನ ಉದ್ಯಮಿ ವಿಜಯೇಂದ್ರ ಭಟ್ ಕಾರಿಗೆ ಗುಂಡು ಹಾರಿಸಲಾಗಿದೆ.
ಭೂಗತ ಲೋಕದ ಪಾತಕಿ ವಿಕ್ಕಿ ಶೆಟ್ಟಿ ಸೂಚನೆಯಂತೆ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.
ಮಂಗಳೂರಿನ ಬಲ್ಲಾಳ್ ಬಾಗ್ ಎಂಬಲ್ಲಿ ಘಟನೆ ನಡೆದಿದೆ.

ವಿಜಯೇಂದ್ರ ಭಟ್ ಎಂಬುವವರ ಕಾರಿಗೆ ಪಿಸ್ತೂಲಿನಿಂದ ಗುಂಡು ಹಾರಿಸಲಾಗಿದೆ. ಈ ಕುರಿತು ಮಂಗಳೂರಿನ ಬರ್ಕೆ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಭಟ್, ಪಿವಿಎಸ್ ಜಂಕ್ಷನ್ ಲ್ಲಿರುವ ಸುಧೀಂದ್ರ ಸೂಪರ್ ಮಾರ್ಕೆಟ್ ಮತ್ತು ಸಾಯ್ಬಿನ್ ಕಾಂಪ್ಲೆಕ್ಸ್ ಮಾಲಕರಾಗಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ