ಯಡಿಯೂರಪ್ಪ ಬಾಯಿ ದೆವ್ವದ ಬಾಯಿ ಇದ್ದಂತೆ ಎಂದ ಸಚಿವ

ಸೋಮವಾರ, 24 ಸೆಪ್ಟಂಬರ್ 2018 (19:43 IST)
ಬಿ.ಎಸ್.  ಯಡಿಯೂರಪ್ಪನವರ ಬಾಯಿ ದೆವ್ವದ ಬಾಯಿ ಇದ್ದಂತೆ ಎಂದು ಸಚಿವರೊಬ್ಬರು ಕಿಡಿಕಾರಿದ್ದಾರೆ.

ಇಡೀ ದೇಶಕ್ಕೆ ಆಪರೇಷನ್ ಮಾಡೋಕೆ ಬರುತ್ತೆ ಅಂಥಾ ತೋರಿಸಿದವರೆ ಈಗ ಬೇರೆ ಪಕ್ಷಗಳು ಆಪರೇಷನ್ ಮಾಡುತ್ತಿವೆ ಎನ್ನುತ್ತಿರುವುದಕ್ಕೆ ನಾಚಿಕೆ ಬರಬೇಕು.

ದೆವ್ವದ ಬಾಯಿಯಲ್ಲಿ ಏನೋ ಹೇಳುತ್ತದೆಯೋ ಅದೇ ರೀತಿ‌ ಬಿಎಸ್ ವೈ ಹೇಳುತ್ತಾರೆ ಎಂದು ಸಚಿವ ವೆಂಕಟರಾವ್ ನಾಡಗೌಡ ವ್ಯಂಗ್ಯವಾಡಿದ್ದಾರೆ.

ಬೀದರನಲ್ಲಿ ಮಾತನಾಡಿದ ಅವರು, ಬಿಎಸ್ ವೈ ವಿರುದ್ದ ವಾಗ್ದಾಳಿ ನಡೆಸಿದ್ದಾರೆ‌.  ಆಪರೇಷನ್ ಕಮಲದ ರೂವಾರಿ ಬಿಎಸ್ ವೈ ಆಗಿದ್ದಾರೆ. ನಾನು ಶಾಸಕನಾಗಿದ್ದಾಗ ಆಪರೇಷನ್ ಮಾಡಿ, ರಾಜೀನಾಮೆ ಕೊಡಿಸಿ ಮಂತ್ರಿ ಮಾಡಿದ್ರು.  ಆಪರೇಷನ್ ಕಮಲ ತೋರಿಸಿಕೊಟ್ಟಿದ್ದೇ ಅವರು‌. ಈಗಾ ಅವರಿಗೆ ಆಪರೇಷನ್ ಬಗ್ಗೆ ಭಯ ಶುರುವಾಗಿದೆ‌. ಆಪರೇಷನ್ ಮಾಡೋದು ಅವರಿಗೆ ಹವ್ಯಾಸವಾಗಿದೆ ಎಂದು ಬಿಎಸ್ ವೈ ವಿರುದ್ದ ಕಿಡಿಕಾರಿದರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ