ಡಿ ಬಾಸ್ ಅಭಿಮಾನಿಗಳು ಜೆಡಿಎಸ್ ಸೇರ್ಪಡೆ: ಸುಮಲತಾಗೆ ಶಾಕ್

ಬುಧವಾರ, 10 ಏಪ್ರಿಲ್ 2019 (18:11 IST)
ನಟ ದರ್ಶನ್ ಪಕ್ಷೇತರ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದರೆ, ಇತ್ತ ದರ್ಶನ್ ಅಭಿಮಾನಿಗಳು ಜೆಡಿಎಸ್ ಸೇರ್ಪಡೆಗೊಂಡು ಸುಮಲತಾಗೆ ಶಾಕ್ ನೀಡಿದ್ದಾರೆ.

ನಟ ದರ್ಶನ್ ಅಭಿಮಾನಿಗಳು ಜೆಡಿಎಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸುಮಲತಾ ಅಂಬರೀಶ್, ದರ್ಶನ್ ಮತ್ತು ಯಶ್ ಗೆ ಎಲ್ಲಾ ಪಕ್ಷಗಳಲ್ಲಿಯೂ ಅಭಿಮಾನಿಗಳಿದ್ದಾರೆ. ದರ್ಶನ್ ಅಭಿಮಾನಿಗಳು ಈಗ ಜೆಡಿಎಸ್‌ ಸೇರಿದ್ದಾರೆಂದರೆ ಯೋಚನೆ ಮಾಡಬೇಕು ಅದರ ಹಿಂದೆ ಏನಿದೆ ಅಂತ ಎಂದರು.

ಇನ್ನು ಅನ್ಯಾಯದ ವಿರುದ್ಧ ಎತ್ತಿದ ಧ್ವನಿಗೆ ನ್ಯಾಯ ಸಿಕ್ಕಿದೆ. ಹೀಗಾಗಿ ಡಿಸಿ ವರ್ಗಾವಣೆ ಆಗಿದೆ. ಅಧಿಕಾರದಲ್ಲಿದ್ದಾಗ ಇವರು ಯಾರನ್ನು ವರ್ಗಾವಣೆ ಮಾಡಿಲ್ವ..? ಅಧಿಕಾರದಲ್ಲಿರುವ ಪಕ್ಷಗಳು ಅಧಿಕಾರಿಗಳನ್ನ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುತ್ತೆ. ಹಾಗಾಗಿ ಚುನಾವಣಾ ಆಯೋಗ ಮಂಡ್ಯ ಡಿಸಿ ಅವರನ್ನ ವರ್ಗಾಯಿಸಿದ್ದಾರೆ.

ಡಿಸಿ ವರ್ಗಾವಣೆಯಿಂದ ಇವರಿಗಾದ ನಷ್ಟ ಏನು..? ಯಾಕೆ ಚುನಾವಣಾ ಆಯೋಗದ ಬಗ್ಗೆ ಮಾತಮಾಡ್ತಿದ್ದಾರೆ..? ಎಂದು ಪ್ರಶ್ನಿಸಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ