ನಿಖಿಲ್, ಪ್ರಜ್ವಲ್, ದೇವೇಗೌಡ ಎಲ್ಲಿದಿಯಪ್ಪಾ ಎಂದೋರು ಯಾರು?

ಶನಿವಾರ, 13 ಏಪ್ರಿಲ್ 2019 (18:30 IST)
ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖೀಲ್ ಅವರ ಕುರಿತ ನಿಖೀಲ್ ಎಲ್ಲಿದೀಯಪ್ಪಾ  ಎಂಬ ಟ್ರೋಲ್ ಗೆ ಮಾಜಿ ಸಚಿವರೊಬ್ಬರು ನೀಡಿರುವ ಹೇಳಿಕೆ ವೈರಲ್ ಆಗಿದೆ.

ಯಾದಗಿರಿಯಲ್ಲಿ‌ ಮಾಜಿ ಸಚಿವ ರಾಜುಗೌಡ ಮಾತನಾಡಿದ್ದು, ಸಿಎಂ ಕುಮಾರಸ್ವಾಮಿ ಅವರಿಗೆ ಕುಮಾರಸ್ವಾಮಿ ಹೇಳಿದ್ದ ನಿಖೀಲ್ ಎಲ್ಲಿದೀಯಪ್ಪಾ ಟ್ರೋಲ್ ಗೆ ಟಾಂಗ್ ಕೊಟ್ಟಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ರಾಯಚೂರು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ ನಾಯಕ ಪರ ಪ್ರಚಾರ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ಸಿಎಂ ಕುಮಾರಸ್ವಾಮಿ ಲೋಕಸಭಾ ಚುನಾವಣೆಯ ಫಲಿತಾಂಶ ಮುನ್ನ ನಿಖೀಲ್ ಗೆ ಎಲ್ಲಿದೀಯಪ್ಪಾ ಎಂದು ಹುಡುಕುತ್ತಿದ್ದಾರೆ. ಕುಮಾರಸ್ವಾಮಿ ಅವರು ನಮ್ಮ ಅಪ್ಪ ದೇವೇಗೌಡ ಎಲ್ಲಿದೀಯಪ್ಪಾ, ನನ್ನ ಅಣ್ಣನ‌‌ ಮಗ ಪ್ರಜ್ವಲ್ ಎಲ್ಲಿದೀಯಪ್ಪಾ, ನಿಖೀಲ್ ಎಲ್ಲಿ‌ ಮಾಯಾ ಆಗಿದಿಯಪ್ಪಾ ಎಂದು ಕೇಳುವ ಪರಿಸ್ಥಿತಿ ಕುಮಾರಸ್ವಾಮಿಗೆ ಬರುತ್ತದೆ ಎಂದರು.

ನಿಖೀಲ್ ಎಲ್ಲಿದೀಯಪ್ಪಾ ಚಿತ್ರದಲ್ಲಿ ಪಾತ್ರ ಅವಕಾಶ ಸಿಕ್ಕರೆ ಪಾತ್ರ ಮಾಡಲ್ಲ. ಒಂದು ಸಣ್ಣ ಸೈನಿಕನ ಪಾತ್ರ ಸಿಕ್ಕರೆ ಮೋದಿ ಜೀವನಾಧಾರಿತ ಚಿತ್ರದಲ್ಲಿ ನಟನೆ ಮಾಡಲು ಸಿದ್ಧ ಅಂತ ಹೇಳಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ