ಕೊವಿಶೀಲ್ಡ್ ತಯಾರಕ ಕಂಪನಿ ಸಿಇಒ ಆಡಾರ್ ಪೂನಾವಾಲಗೆ ಬೆದರಿಕೆ

ಗುರುವಾರ, 29 ಏಪ್ರಿಲ್ 2021 (09:58 IST)
ನವದೆಹಲಿ: ದೇಶದಲ್ಲಿ ಕೊರೋನಾಗೆ ಸಂಜೀವಿನಿಯಾಗಿರುವ ಕೊವಿಶೀಲ್ಡ್ ಲಸಿಕೆ ತಯಾರಕ ಕಂಪನಿ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆಡಾರ್ ಪೂನಾವಾಲಗೆ ಬೆದರಿಕೆ ಕರೆಗಳು ಬರತೊಡಗಿವೆ.
Photo Courtesy: Google


ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತಿದೆ. ಇದರ ಬೆನ್ನಲ್ಲೇ ಆಡಾರ್ ಪೂನವಾಲಗೆ ಬೆದರಿಕೆ ಕರೆಗಳೂ ಹೆಚ್ಚಿವೆ. ಈ ಕಾರಣಕ್ಕೆ ಅವರಿಗೆ ವೈ ಕೆಟಗರಿ ಭದ್ರತೆ ಒದಗಿಸಲಾಗಿದೆ.

ಲಸಿಕೆ ಪೂರೈಕೆ ಸಂಬಂಧವಾಗಿ ವಿವಿಧ ಗುಂಪುಗಳು ಅವರಿಗೆ ಬೆದರಿಕೆ ಹಾಕುತ್ತಿರುವುದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಸಿಆರ್ ಪಿಎಫ್ ಯೋಧರು ಅವರಿಗೆ ವೈ ಕೆಟಗರಿ ಭದ್ರತೆ ಒದಗಿಸಲಿದ್ದಾರೆ. ಸ್ವತಃ ಸೀರಂ ಸಂಸ್ಥೆ ಈ ಸಂಬಂಧ ಸರ್ಕಾರಕ್ಕೆ ಮನವಿ ಮಾಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ