ರಾಜ್ಯದಲ್ಲಿ ಮಳೆಯಿಂದ ಅಪಾರ ಹಾನಿ; ರಾಜ್ಯ ಸಚಿವರ ಜೊತೆಗೆ ಸಭೆ ನಡೆಸಲಿರುವ ಪ್ರಧಾನಿ ಮೋದಿ

ಸೋಮವಾರ, 10 ಆಗಸ್ಟ್ 2020 (11:16 IST)
ನವದೆಹಲಿ : ರಾಜ್ಯದಲ್ಲಿ ಸುರಿದ  ಭಾರೀ ಮಳೆಯಿಂದ ಅಪಾರ ಹಾನಿ ಸಂಭವಿಸಿದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಇಂದು ರಾಜ್ಯ ಸಚಿವರ ಜೊತೆಗೆ ಸಭೆ ಕರೆದಿದ್ದಾರೆ.

ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ರಾಜ್ಯ ಸಚಿವರ ಜೊತೆ ಚರ್ಚೆ ನಡೆಸಿ ಮಳೆ ಹಾನಿಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ. ಹಾಗೇ ಈ ಸಭೆಯಲ್ಲಿ  ಸಚಿವರಾದ ಬೊಮ್ಮಾಯಿ, ಅಶೋಕ್ ಹಾಜರಾಗಲಿದ್ದು, ಪ್ರಧಾನಿ ಮೋದಿ ಬಳಿ ಮಳೆ ಹಾನಿ ಪರಿಹಾರಕ್ಕೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ