ಎರಡು ನೂರು ರೂಪಾಯಿಗೆ ಹೆಣ್ಣುಮಗು ಮಾರಾಟ!
ದಕ್ಷಿಣ ಮಹಾರಾಣಿಪುರದ ಸರತ್ ಚಂದ್ರ ಎಡಿಸಿ ಗ್ರಾಮದ ಬುಡಕಟ್ಟು ಕುಟುಂಬದ ಕರ್ಣ ದೆಬರ್ಮಾ ಅವರು ಮಗುವಿನ ಮಾರಾಟ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಬಿಪಿಎಲ್ ಕಾರ್ಡ್, ಮನೆ ಹಾಗೂ ಶೌಚಾಲಯ ಒದಗಿಸಲು ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕುಟುಂಬದ ನಿರ್ವಹಣೆ ಬಹಳ ಕಷ್ಟವಾಗಿದ್ದು ಮಗುವಿನ ಮಾರಾಟ ಮಾಡಬೇಕಾಯಿತು ಎಂದಿದ್ದಾರೆ.
ರಾಜಕೀಯ ಮುಖಂಡರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರೂ, ಯಾವುದೇ ಬೇಡಿಕೆ ಈಡೇರಿಲ್ಲ ಎಂದು ತಿಳಿಸಿದ್ದಾರೆ.