ರೊಟ್ಟಿ ಸುಟ್ಟಿದ್ದು ಕಪ್ಪಾಗಿದ್ದಕ್ಕೆ ಪತ್ನಿಗೆ ತಲಾಖ್ ನೀಡಿದ ಭೂಪ!

ಮಂಗಳವಾರ, 10 ಜುಲೈ 2018 (18:52 IST)
ಉತ್ತರ ಪ್ರದೇಶ : ಕೇಂದ್ರದಲ್ಲಿ ಎನ್ ಡಿೆ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಮಹಿಳೆಯರ ಹಿತ ಕಾಪಾಡಲು ಅನೇಕ ಕ್ರಮ ತೆಗೆದುಕೊಂಡಿದ್ದು ಅದರಲ್ಲಿ ಮುಸ್ಲಿಂ ಮಹಿಳೆಯರಿಗೆ ನೀಡುವ ತ್ರಿವಳಿ ತಲಾಖ್ ಕ್ರಮವನ್ನು ರದ್ದು ಮಾಡಿರುವುದು ಕೂಡ ಒಂದು. ಆದರೆ ಕೆಲವು ಕಡೆ ಈಗಲೂ ಮಹಿಳೆಯರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.


ಹೌದು. ಇತ್ತೀಚೆಗೆ ಉತ್ತರಪ್ರದೇಶ ಮಹೋಬಾ ಜಿಲ್ಲೆಯ ಭೂಪನೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ. ಅವನು ಆಕೆಗೆ ತಲಾಖ್ ನೀಡಿರುವುದಕ್ಕೆ ಕಾರಣ ತಿಳಿದರೆ ಆಶ್ಚರ್ಯವಾಗುತ್ತದೆ. ಏಕೆಂದರೆ ಆತ ತನ್ನ ಪತ್ನಿಗೆ  ತಲಾಖ್ ನೀಡಿದ್ದು ಒಂದು ಕ್ಷುಲಕ ಕಾರಣಕ್ಕೆ.


ಅದೇನೆಂದರೆ 3 ದಿನಗಳ ಹಿಂದೆ ಆತ ಪತ್ನಿ ಮಾಡಿದ್ದ ರೊಟ್ಟಿ ಸುಟ್ಟು ಕಪ್ಪಾಗಿದೆ ಎಂದು ಬೇಸತ್ತು ಆ ಕ್ಷಣದಲ್ಲೇ ತ್ರಿವಳಿ ತಲಾಖ್ ನೀಡಿದ್ದಾನೆ. ಪತ್ನಿ ಈ ಬಗ್ಗೆ ದೂರು ನೀಡಿದ ಬಳಿಕ ಈ ವಿಷಯ ಬಹಿರಂಗವಾಗಿದೆ. ಆದರೆ ತ್ರಿವಳಿ ತಲಾಖ್ ಅಸಿಂಧು ಎಂದು ಕಳೆದ ವರ್ಷದ ಕೋರ್ಟ್ ತೀರ್ಪು ನೀಡಿದ್ದು  ಈ ಮಹಾಶಯನಿಗೆ ತಿಳಿದಿಲ್ಲವೆಂದು ಕಾಣುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ