ನಾನು ನಮ್ಮ ಪಕ್ಷ ಪ್ರಾಮಾಣಿಕವಾಗಿ ಜನರ ಹಿತಕ್ಕಾಗಿ ನಮ್ಮ ಸೇವೆಯನ್ನು ಸಲ್ಲಿಸಲು ತಯಾರಿದ್ದೇವೆ – ಕಮಲ್ ಹಾಸನ್

ಮಂಗಳವಾರ, 5 ಜೂನ್ 2018 (15:45 IST)
ಚೆನ್ನೈ : ಕಾವೇರಿ ನದಿ ನೀರಿನ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ನಾನು ನಮ್ಮ ಪಕ್ಷ ಪ್ರಾಮಾಣಿಕವಾಗಿ ಜನರ ಹಿತಕ್ಕಾಗಿ ನಮ್ಮ ಸೇವೆಯನ್ನು ಸಲ್ಲಿಸಲು ತಯಾರಿದ್ದೇವೆ ಎಂದು ಸೂಪರ್ ಸ್ಟಾರ್ ಹಾಗು 'ಮಕ್ಕಳ್ ನೀದಿ ಮೈಯಮ್' ಪಕ್ಷದ ನಾಯಕ ಕಮಲ್ ಹಾಸನ್ ಅವರು ಹೇಳಿದ್ದಾರೆ.

ಈ ವಿಷಯದ ಬಗ್ಗೆ ರಾಜ್ಯದ ಮಾನ್ಯ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಮಲ್​ ಹಾಸನ್ ಅವರು,’ ನಾನು ವಕೀಲರ ಮಗ. ನನ್ನ ಕುಟುಂಬದಲ್ಲಿ ತುಂಬಾ ಜನ ವಕೀಲರಿದ್ದಾರೆ. ಅವರು ಕೂಡ ಕಾವೇರಿ ವಿವಾದವನ್ನು ಎರಡೂ ರಾಜ್ಯಗಳ ಜನರೇ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ. ನಾನು ನನ್ನ ಜನರ ಪರವಾಗಿ ಮಾತನಾಡಲು ಬಂದಿದ್ದೇನೆ. ಈ ಸಮಸ್ಯೆ ಬಗೆಹರಿಸಲು ನಾನು ಜನರ ಕಾಲಿನ ಚಪ್ಪಲಿಯಾಗಲೂ ಸಿದ್ಧ ಎಂದು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ