ನುಡಿಸಿರಿಯಲ್ಲಿ ಶನಿವಾರದ ಕಾರ್ಯಕ್ರಮ

ಶುಕ್ರವಾರ, 28 ನವೆಂಬರ್ 2008 (19:03 IST)
ನುಡಿಸಿರಿ-08 ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಶನಿವಾರ ನಡೆಯುವ ಕಾರ್ಯಕ್ರಮಗಳಕೆ.ವಿ.ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ: ಮುಂಜಾನೆ 5 ಗಂಟೆಗೆ ಉದಯರಾಗ ವೈಭವ: ವೆಂಕಟೇಶ್ ಕುಮಾರ್, ಧಾರವಾಡ ಅವರಿಂದ ಹಿಂದೂಸ್ಥಾನಿ ಗಾಯನ 6.30ರಿಂದ ನಾಡೋಜ ಚೆನ್ನವೀರ ಕಣವಿಯವರೊಂದಿಗೆ ಸಂವಾದ.

ರತ್ನಾಕರವರ್ಣಿ ವೇದಿಕೆಯಲ್ಲಿ:

ಬೆಳಿಗ್ಗೆ 8.30ಕ್ಕೆ ಸುರಮಣಿ ಮಹಾಲಕ್ಷ್ಮಿ ಶೆಣೈ, ಕಾರ್ಕಳ ಅವರಿಂದ ಭಾವ ಲಹರಿ.

9.30ಕ್ಕೆ ಕವಿಸಮಯ-ಕವಿನಮನ, ವಾಸುದೇವ ನಾಡಿಗ್ ಅವರಿಂದ.

9.50ಕ್ಕೆ ವಿಚಾರಗೋಷ್ಠಿ-2:

1. ಪ್ರಾಚೀನ ಕನ್ನಡ ಸಾಹಿತ್ಯ-ಪರಂಪರೆ,ಪ್ರಕಾರಗಳು ಮತ್ತು ಮುಖಾಮುಖಿ: ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ.

2. ಆಧುನಿಕ ಸಾಹಿತ್ಯ: ಹೊಸ ಸಂವೇದನಗಳು: ಡಾ.ಅರವಿಂದ ಮಾಲಗತ್ತಿ.

11.30ಕ್ಕೆ ಕಥಾ ಸಮಯ: ವೈದೇಹಿ ಅವರಿಂದ

ಮಧ್ಯಾಹ್ನ 12ಕ್ಕೆ ಜಿ.ಪಿ.ರಾಜರತ್ನಂ ನೆನಪು: ಪ್ರೊ.ಎಂ.ರಾಮಚಂದ್ರ

12.30ಕ್ಕೆ ಧರಣೀದೇವಿ ಮಾಲಗತ್ತಿ ಅವರಿಂದ ಕವಿಸಮಯ-ಕವಿನಮನ

2 ಗಂಟೆಗೆ ಡಾ.ಹೇಮಾ ಪಟ್ಟಣಶೆಟ್ಟಿ ಅವರಿಂದ ಕವಿಸಮಯ-ಕವಿನಮನ

2.20ಕ್ಕೆ ವಿಚಾರಗೋಷ್ಠಿ-3: ಮಾಧ್ಯಮದಲ್ಲಿ ಕನ್ನಡ: ಶಕ್ತಿ ಮತ್ತು ವ್ಯಾಪ್ತಿ

1. ಮುದ್ರಣ ಮಾಧ್ಯಮ: ರವಿ ಬೆಳಗೆರೆ

2. ವಿದ್ಯುನ್ಮಾನ ಮಾಧ್ಯಮ: ದೀಪಕ್ ತಿಮ್ಮಯ್ಯ

4 ಗಂಟೆಗೆ ಕುಂ.ವೀರಭದ್ರಪ್ಪ ಅವರಿಂದ ಕಥಾಸಮಯ

4.25ಕ್ಕೆ ತಾಳ್ತಜೆ ವಸಂತ್ ಕುಮಾರ್ ಅವರಿಂದ ವಿ.ಕೃ.ಗೋಕಾಕ್ ನೆನಪು.

4.55ಕ್ಕೆ ಜಯರಾಮ ಕಾರಂತರಿಂದ ಕವಿಸಮಯ ಕವಿನಮನ

5.15ಕ್ಕೆ ಚಂದ್ರಶೇಖರ ಕೆದ್ಲಾಯ ಅವರಿಂದ ಗಮಕ ವಾಚನ-ವ್ಯಾಖ್ಯಾನ

ಸಂಜೆ 6ಕ್ಕೆ ಬಸವರಾಜ ಮಾಮನಿ ಮತ್ತು ಗಂಗಾವತಿ ನರಸಿಂಹ ಜೋಷಿ ಅವರಿಂದ ಮಾತಿನ ಮಂಟಪ.

ರತ್ನಾಕರವರ್ಣಿ ವೇದಿಕೆಯಲ್ಲಿ

ಸಂಜೆ 7ರಿಂದ ನೃತ್ಯ ಕಲಾಮಂದಿರಂ, ಬೆಂಗಳೂರು ಇವರಿಂದ ಭರತಾಂಜಲಿ ಸಮೂಹನೃತ್ಯ

ಕು.ಶಿ.ಹರಿದಾಸ ಭಟ್ಟ ವೇದಿಕೆಯಲ್ಲಿ

ಸಂಜೆ 6.30ಕ್ಕೆ ಸಾಲಿಗ್ರಾಮ ಮಕ್ಕಳ ಮೇಳದಿಂದ ಕೃಷ್ಣಾರ್ಜುನ ಯಕ್ಷಗಾನ.

ಶಿವರಾಮ ಕಾರಂತ ವೇದಿಕೆಯಲ್ಲಿ

ಸಂಜೆ 6ಕ್ಕೆ ಮೈಸೂರಿನ ಶ್ರೀಮತಿ ವಿಜಯಮೂರ್ತಿ ಬಳಗದಿಂದ ಸಿರಿಗನ್ನಡಂ ಗೆಲ್ಗೆ ನೃತ್ಯರೂಪಕ

7.30ಕ್ಕೆ ಮಂಟಪ ಪ್ರಭಾಕರ ಉಪಾಧ್ಯರಿಂದ ಏಕವ್ಯಕ್ತಿ ಯಕ್ಷಗಾನ- ವೇಣು ವಿಸರ್ಜನ

ಕೆ.ವಿ.ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ

ಸಂಜೆ 6,30ರಿಂದ ರಮೇಶ್ಚಂದ್ರ ನಿರ್ದೇಶನದಲ್ಲಿ ಬಾಲ ಪ್ರತಿಭೆಗಳಿಂದ ಭಾವ ರಾಗ ಮಾಲಿಕೆ

9.30ರಿಂದ ಜಾನಪದ ನೃತ್ಯ ವೈವಿಧ್ಯ: ಆಳ್ವಾಸ್ ವಿದ್ಯಾರ್ಥಿಗಳು ಮತ್ತು ಕನ್ನಡ ನಾಡಿನ ಹೆಸರಾಂತ ತಂಡಗಳಿಂದ.

ವೆಬ್ದುನಿಯಾವನ್ನು ಓದಿ