ಕಾಲಿಗೆ ಗಾಯವಾಗಿದ್ದರೂ ಕ್ಯಾರೇ ಎನ್ನದೆ ಆಡಿದ ಪಿ.ವಿ. ಸಿಂಧು

ಸೋಮವಾರ, 8 ಆಗಸ್ಟ್ 2022 (15:04 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆಲ್ಲಲೇಬೇಕು ಎಂಬ ಪಣ ತೊಟ್ಟು ಕಣಕ್ಕಿಳಿದಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಇಂದು ಕಾಲಿಗೆ ಗಾಯವಾಗಿದ್ದರೂ ಸಿಂಹಿಣಿಯಂತೆ ಹೋರಾಡಿ ಪಂದ್ಯ ಗೆದ್ದರು.

ಸೆಮಿಫೈನಲ್ ವೇಳೆ ಪಿ.ವಿ. ಸಿಂಧು ಎಡ ಕಾಲಿಗೆ ಗಾಯವಾಗಿತ್ತು. ಹೀಗಾಗಿ ಸಿಂಧು ಇಂದಿನ ಪಂದ್ಯಕ್ಕೆ ಬ್ಯಾಂಡೇಜ್ ಸುತ್ತಿಕೊಂಡೇ ಕಣಕ್ಕಿಳಿದಿದ್ದರು.

ಹಾಗಿದ್ದರೂ ಆಟದ ವೇಳೆ ಕೊಂಚವೂ ಗಾಯವಾಗಿದೆ ಎಂದು ತೋರಿಸಿಕೊಳ್ಳಲೇ ಇಲ್ಲ. ಅದೇ ಏಕಾಗ್ರತೆ, ಅದೇ ಆಕ್ರಮಣ ಶೈಲಿಯಲ್ಲಿ ಆಡಿ ದೇಶವೇ ಹೆಮ್ಮೆಪಡುವಂತೆ ಮಾಡಿದರು. ವಿಶೇಷವೆಂದರೆ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸಿಂಧು ಪ್ರೇಕ್ಷಕರಿಂದಲೂ ಕೊನೆಯವರೆಗೂ ಭಾರೀ ಜೈಕಾರ ಕೇಳಿಬರುತ್ತಲೇ ಇತ್ತು. 2014 ರ ಕಾಮನ್ ವೆಲ್ತ್ ನಲ್ಲಿ ಕಂಚು, 2018 ರಲ್ಲಿ ಬೆಳ್ಳಿ ಗೆದ್ದಿದ್ದ ಸಿಂಧು ಕೊನೆಗೂ ಈ ಬಾರಿ ಚಿನ್ನ ಗೆದ್ದೇಬಿಟ್ಟರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ