ಖಾತೆ ಬೇಕು ಎಂದು ದೆಹಲಿಗೆ ಬರ್ಬೇಡಿ: ಕಾಂಗ್ರೆಸ್ ಆಕಾಂಕ್ಷಿಗಳಿಗೆ ಹೈಕಮಾಂಡ್ ತಾಕೀತು!

ಸೋಮವಾರ, 4 ಜೂನ್ 2018 (10:11 IST)
ನವದೆಹಲಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕೆಲಸ ನಡೆಯುತ್ತಿದ್ದು, ಆಕಾಂಕ್ಷಿಗಳು ಹೈಕಮಾಂಡ್ ಬಳಿ ಒತ್ತಡ ಹೇರುವುದು ಸಾಮಾನ್ಯ. ಆದರೆ ಈ ರೀತಿ ದೆಹಲಿಗೆ ಬಂದು ತೊಂದರೆ ಕೊಡಬೇಡಿ ಎಂದು ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಗೆ ತಾಕೀತು ಮಾಡಿದೆ.

ಸಚಿವರ ಪಟ್ಟಿ ಅಂತಿಮಗೊಳಿಸಲು ರಾಹುಲ್ ಗಾಂಧಿ ವಿದೇಶದಿಂದ ಆಗಮನಿಸಬೇಕಿದೆ. ಇಂದು ರಾಹುಲ್ ಗಾಂಧಿ ಬಂದ ಮೇಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಅವರ ಜತೆ ಪರಾಮರ್ಶಿಸಿ ಪಟ್ಟಿ ಅಂತಿಮಗೊಳಿಸಲಿದ್ದಾರೆ.

ಈ ನಡುವೆ ರಾಜ್ಯ ನಾಯಕರು ಆಗಾಗ ಬಂದು ಹೈಕಮಾಂಡ್ ಗೆ ಸಚಿವ ಖಾತೆ ಬಗ್ಗೆ ಒತ್ತಡ ಹೇರುವುದು ಬೇಡ ಎಂದು ಈಗಾಗಲೇ ಸ್ಪಷ್ಟ ಸಂದೇಶ ನೀಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ