ಕೆಂಪುಕೋಟೆಯಿಂದ ನಿರ್ಗಮಿಸಿದ ಬಳಿಕ ಪ್ರಧಾನಿ ಮೋದಿ ಮಾಡಿದ ಕೆಲಸವೇನು ಗೊತ್ತಾ?
ಧ್ವಜಾರೋಹಣ ಕಾರ್ಯಕ್ರಮ ಮುಗಿದ ಬಳಿಕ ಅಲ್ಲಿ ನೆರೆದಿದ್ದ ಮಕ್ಕಳಿಗೆ ಶುಭಾಷಯ ಕೋರಿ ಪ್ರಧಾನಿ ಮೋದಿ ಸಂಜೆ ತಮ್ಮ ರಾಜಕೀಯ ಗುರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಬಗ್ಗೆ ತಿಳಿದು ಸೀದಾ ಆಸ್ಪತ್ರೆಗೆ ತೆರಳಿದ್ದಾರೆ.
ಅನಾರೋಗ್ಯದ ಕಾರಣದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕಳೆದ ಕೆಲವಾರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಮುತ್ಸುದ್ದಿ ನಾಯಕನನ್ನು ನೋಡಲು ಪ್ರಧಾನಿ ಮೋದಿ ತೆರಳಿದ್ದಾರೆ. ಕೆಂಪು ಕೋಟೆಯಲ್ಲಿ ಭಾಷಣ ಮಾಡುವಾಗಲೂ ಮೋದಿ, ಅಟಲ್ ಬಿಹಾರಿ ವಾಜಪೇಯಿ ಮಾತುಗಳನ್ನು ಸ್ಮರಿಸಿಕೊಂಡಿದ್ದರು. ಸಂಜೆ ತಮ್ಮ ಎಂದಿನ ಭದ್ರತಾ ಪಡೆಗಳ ನೆರವಿಲ್ಲದೇ ಪ್ರಧಾನಿ ಮೋದಿ ವಾಜಪೇಯಿ ಭೇಟಿ ಮಾಡಿ ಬಂದಿದ್ದಾರೆ.