ಬೆಂಗಳೂರು: ಆರ್ ಸಿಬಿ ಆಟಗಾರರನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿ ಚಿನ್ನಸ್ವಾಮಿ ಮೈದಾನದ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ಆರ್ ಸಿಬಿ ಕಿಂಗ್ ವಿರಾಟ್ ಕೊಹ್ಲಿ ಏನೂ ಹೇಳಿಲ್ವಾ? ಇಲ್ಲಿದೆ ಅಪ್ ಡೇಟ್.
ಘಟನೆ ನಡೆದ ಬಳಿಕವೂ ಅರ್ಧಗಂಟೆ ಚಿನ್ನಸ್ವಾಮಿ ಮೈದಾನದಲ್ಲಿ ಚುಟುಕಾಗಿ ಸಂಭ್ರಮಾಚರಣೆ ಮಾಡಲಾಯಿತು. ಇದಾದ ಬಳಿಕ ಆರ್ ಸಿಬಿ ಫ್ರಾಂಚೈಸಿ ಸೋಷಿಯಲ್ ಮೀಡಿಯಾ ಮೂಲಕ ಘಟನೆ ಬಗ್ಗೆ ವಿಷಾಧ ವ್ಯಕ್ತಪಡಿಸಿ ಸಂದೇಶ ಬರೆದುಕೊಂಡಿದೆ.
ಇದೀಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇದೇ ಸಂದೇಶವನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಈ ಸುದ್ದಿ ಕೇಳಿ ಹೃದಯ ಚೂರಾಗಿದೆ ಎಂದು ನೋವಿನ ಇಮೋಜಿ ಹಾಕಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಕೂಡಾ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಹಲವು ಜನ ಕಾಮೆಂಟ್ ಮಾಡಿದ್ದು, ಸರಿಯಾಗಿ ವ್ಯವಸ್ಥೆ ಮಾಡಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಇದಕ್ಕೆ ಆಟಗಾರರು ಕಾರಣರಲ್ಲ, ಹೀಗಾಗಿ ಅವರನ್ನು ದೂಷಿಸಬೇಡಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.