ವಿಜಯ್ ಹಜಾರೆ ಟ್ರೋಫಿ ಕ್ವಾ. ಫೈನಲ್: ಕರ್ನಾಟಕ ಎದುರು ತಮಿಳುನಾಡು ದಿಟ್ಟ ಬ್ಯಾಟಿಂಗ್

ಮಂಗಳವಾರ, 21 ಡಿಸೆಂಬರ್ 2021 (10:54 IST)
ಜೈಪುರ: ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ನಲ್ಲಿ ಪ್ರಬಲ ತಮಿಳುನಾಡು ವಿರುದ್ಧ ಟಾಸ್ ಗೆದ್ದ ಕರ್ನಾಟಕ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.

ಇತ್ತೀಚೆಗಿನ ವರದಿ ಬಂದಾಗ ತಮಿಳುನಾಡು 1 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 109 ರನ್ ಗಳಿಸಿದೆ. ಸಾಯ್ ಕಿಶೋರ್ 34, ಜಗದೀಶನ್ 56 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ವಿಜಯ್ ಕುಮಾರ್ ವೈಶಾಖ್ ಏಕೈಕ ವಿಕೆಟ್ ಕಬಳಿಸಿದ್ದಾರೆ.

ಪ್ರಮುಖ ಹಂತಗಳಲ್ಲಿ ಮುಗ್ಗರಿಸುವ ಕರ್ನಾಟಕ ಈ ಬಾರಿ ಅದೇ ತಪ್ಪು ಮಾಡದೇ ಇದ್ದರೆ ಸಾಕು ಎನ್ನುವುದು ಅಭಿಮಾನಿಗಳ ಪ್ರಾರ್ಥನೆ. ಇದಕ್ಕಾಗಿ ರನ್ ನಿಯಂತ್ರಣದ ಜೊತೆಗೆ ವಿಕೆಟ್ ಕೀಳುವುದರತ್ತಲೂ ಗಮನಹರಿಸಬೇಕಾಗಿದೆ. ದಿನೇಶ್ ಕಾರ್ತಿಕ್, ವಾಷಿಂಗ್ಟನ್ ಸುಂದರ್, ವಿಜಯ್ ಶಂಕರ್ ಮುಂತಾದವರ ಬಲಿಷ್ಠ ಬ್ಯಾಟಿಂಗ್ ಬಲ ತಮಿಳುನಾಡಿಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ