ಒಂದು ವಿಷಯ ಹೇಳಬೇಕಾಗಿದೆ ಎಂದು ಫ್ಯಾನ್ಸ್ ತಲೆಗೆ ಹುಳ ಬಿಟ್ಟ ಕೆಎಲ್ ರಾಹುಲ್

Krishnaveni K

ಶುಕ್ರವಾರ, 23 ಆಗಸ್ಟ್ 2024 (10:50 IST)
ಬೆಂಗಳೂರು: ಕನ್ನಡಿಗ, ಟೀಂ ಇಂಡಿಯಾ ಬ್ಯಾಟಿಗ ಕೆಎಲ್ ರಾಹುಲ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ದಿಡೀರ್ ಆಗಿ ಹಾಕಿರುವ ಪೋಸ್ಟ್ ಒಂದು ಎಲ್ಲರ ತಲೆಗೆ ಹುಳ ಬಿಟ್ಟಂತಾಗಿದೆ.

ರಾಹುಲ್ ನಿನ್ನೆ ಸಂಜೆ ಇದ್ದಕ್ಕಿದ್ದಂತೆ ‘ನನಗೆ ಒಂದು ವಿಷಯ ಹೇಳಬೇಕಾಗಿದೆ. ನಿರೀಕ್ಷಿಸಿ’ ಎಂದಷ್ಟೇ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಅವರ ಈ ಪೋಸ್ಟ್ ನೋಡುತ್ತಿದ್ದಂತೇ ಎಲ್ಲರಿಗೂ ಅಚ್ಚರಿಯಾಗಿತ್ತು. ಇದೇನು ಮಹತ್ವದ ವಿಚಾರ ಹೇಳಲಿದ್ದಾರೆ ಎಂದು ಎಲ್ಲರೂ ಕಾಯುತ್ತಲೇ ಇದ್ದರು.

ಇದನ್ನು ನೋಡಿ ರಾಹುಲ್ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಹೇಳುತ್ತಿರಬಹುದಾ ಎಂಬ ಆತಂಕವೂ ಕೆಲವರಿಗೆ ಬಂದಿದ್ದು ಸುಳ್ಳಲ್ಲ. ಮತ್ತೆ ಕೆಲವರು ಅವರು ಆರ್ ಸಿಬಿಗೆ ಸೇರ್ಪಡೆಯಾಗುತ್ತಿರುವ ಬಗ್ಗೆ ಹೇಳಬಹುದೇನೋ ಎಂದು ಕುತೂಹಲದಿಂದ ಕಾಯುತ್ತಿದ್ದರು. ಆದರೆ ಕೊನೆಯಲ್ಲಿ ರಾಹುಲ್ ತಮ್ಮ ಸ್ಟೈಲಿಶ್ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಇದನ್ನು ನೋಡಿದರೆ ಅವರು ಯಾವುದೋ ಬ್ರ್ಯಾಂಡ್ ಬಗ್ಗೆ ಹೇಳುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಹಾಗಿದ್ದರೂ ಈ ಫೋಟೋ ನೋಡಿ ಏನೋ ದೊಡ್ಡದಾಗಿ ಸಿಗ್ನಲ್ ಕೊಡ್ತಿದ್ದೀರಿ ಏನು ಅಂತ ಬೇಗ ಹೇಳಿ ಬಾಸ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ