ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಈಗ ಅಭಿಮಾನಿಗಳಿಗಿಂತಲೂ ದೊಡ್ಡ ಆಸೆ ಹುಟ್ಟಿಕೊಂಡಿದೆಯಂತೆ!

ಗುರುವಾರ, 5 ಏಪ್ರಿಲ್ 2018 (11:54 IST)
ಬೆಂಗಳೂರು: ಐಪಿಎಲ್ ಶುರುವಾಗಲು ಕ್ಷಣಗಣನೆ ಶುರುವಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಳೆದ ಬಾರಿಯ ಕಹಿ ನೆನಪು ಮರೆತು ಹೊಸ ಉತ್ಸಾಹ, ಹೊಸ ಆಟಗಾರರೊಂದಿಗೆ ಕಣಕ್ಕಿಳಿಯುತ್ತಿದೆ.

ಈ ವರ್ಷ ಕಪ್ ನಮ್ಮದೇ ಎನ್ನುತ್ತಿರುವ ಅಭಿಮಾನಿಗಳಿಗಿಂತಲೂ ದೊಡ್ಡ ಆಸೆ ನಾಯಕ ವಿರಾಟ್ ಕೊಹ್ಲಿಗಿದೆಯಂತೆ. ‘ಅಭಿಮಾನಿಗಳಿಗಿಂತಲೂ ಹೆಚ್ಚು ನನಗೆ ಈ ವರ್ಷ ಕಪ್ ಗೆಲ್ಲಬೇಕೆಂಬ ಮಹದಾಸೆಯಿದೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

’10 ವರ್ಷದಿಂದ ಐಪಿಎಲ್ ನಲ್ಲಿ ಬೆಂಗಳೂರು ಪರ ಆಡುತ್ತಿದ್ದೇನೆ. ಮೂರು ಬಾರಿ ಫೈನಲ್ ನಲ್ಲಿ ಎಡವಿದ್ದೇವೆ. ಈ ಬಾರಿ ಫೈನಲ್ ವರೆಗೆ ಬಂದು ಕಪ್ ಗೆಲ್ಲಲೇಬೇಕೆಂಬುದು ನನ್ನ ಗುರಿ’ ಎಂದಿದ್ದಾರೆ ಕೊಹ್ಲಿ. ರನ್ ಮೆಷಿನ್ ಕೊಹ್ಲಿಯೇ ಈ ರೀತಿ ನಿರ್ಧಾರ ಮಾಡಿದರೆ ಮುಗಿಯಿತು. ಬೌಲರ್ ಗಳ ಮೇಲೆ ಮುಗಿ ಬೀಳೋದು ಖಚಿತ. ಆರ್ ಸಿಬಿ ಅಭಿಮಾನಿಗಳಿಗಂತೂ ಖುಷಿಯೋ ಖುಷಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ